ಬೆಳ್ಳೂರು: ಪದ್ಮಶ್ರೀ ಪ್ರಶಸ್ತಿ ಪುರಸ್ಕೃ ತ ಸತ್ಯನಾರಾಯಣ ಬೆಳೇರಿಯವರಿಗೆ ರಾಜ್ಯ ಜೈವಿಕ ವೈವಿಧ್ಯ ಮಂಡಳಿಯ ಅತ್ಯುತ್ತಮ ಸಸ್ಯಜಾಲ ಸಂರಕ್ಷಕ ಕೃಷಿಕರಿ ಗಿರುವ ಪುರಸ್ಕಾರ ಲಭಿಸಿದೆ. 25 ಸಾವಿರ ರೂಪಾಯಿ ಹಾಗೂ ಫಲಕ ವನ್ನು ಪ್ರಶಸ್ತಿ ಒಳಗೊಂಡಿದೆ. 630ರಷ್ಟು ಭತ್ತದ ತಳಿಗಳು, ಔಷಧಿ ಸಸ್ಯಗಳು, ಕಾಳುಮೆಣ ಸು, ನಾಡ ಹಸುಗಳ ಸಂರಕ್ಷ ಣೆಯನ್ನು ಪರಿಗಣಿಸಿ ಇವರನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.







