ಸೇವಾ ಮನೋಭಾವದಲ್ಲಿ ರಾಜಕೀಯ: ಡಿಫಿ ನೀತಿ ವಿರುದ್ಧ ಬಿಜೆಪಿ ಪ್ರತಿಭಟನೆ

ಕಾಸರಗೋಡು: ಜನರಲ್ ಆಸ್ಪತ್ರೆಯ ರೋಗಿಗಳಿಗೆ ನೀಡುವ ಊಟದಲ್ಲಿ ರಾಜಕೀಯ ಬೆರೆಸುವ ಡಿಫಿ ನೇತೃತ್ವದ ಓಟ್ ಬ್ಯಾಂಕ್ ರಾಜಕೀಯ ಕೊನೆಗೊಳಿಸಬೇಕೆಂದು ಆಗ್ರಹಿಸಿ ಬಿಜೆಪಿ ಕಾಸರಗೋಡು ನಗರ ಸಮಿತಿ ನೇ ತೃತ್ವದಲ್ಲಿ ಜನರಲ್ ಆಸ್ಪತ್ರೆ ಮುಂಭಾಗ ದೊಂದಿ ಮೆರವಣಿಗೆ ನಡೆಸಲಾಯಿತು. ‘ಪೊದು ಚೋರ್’ ಎಂಬ ಹೆಸರಲ್ಲಿ ರೋಗಿಗಳಿಗೆ ನೀಡುವ ಊಟದ  ಪ್ಯಾಕೆಟ್‌ನಲ್ಲಿ ಪತಾಕೆ ಹಾಗೂ ಬ್ಯಾನರ್ ಪ್ರದರ್ಶನ ನಡೆಸುತ್ತಿದ್ದು, ಈ ಧೋರಣೆ ಕೊನೆಗೊಳಿಸಬೇಕೆಂದು ಬಿಜೆಪಿ ಆಗ್ರಹಿಸಿದೆ. ದೊಂದಿ ಮೆರವಣಿಗೆಯನ್ನು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಉಮಾ ಕಡಪ್ಪುರ ಉದ್ಘಾಟಿಸಿದರು. ನಗರ ಈಸ್ಟ್ ಭಾಗದ ಅಧ್ಯಕ್ಷ ವರಪ್ರಸಾದ್  ಕೋಟೆಕಣಿ ಸ್ವಾಗತಿಸಿ, ಕಾರ್ಯದರ್ಶಿ ರಾಮ್ ಮೋಹನ್ ನಾಗರಕಟ್ಟೆ ವಂದಿಸಿದರು. ಮಂಡಲ ಕಾರ್ಯ ದರ್ಶಿ ಗುರುಪ್ರಸಾದ್ ಪ್ರಭು, ಅರುಣ್ ಶೆಟ್ಟಿ, ಉಮೇಶ್, ಮನೋಜ್, ಗಣೇಶ್, ಉಮೇಶ್ ಸೇವಾ ಭಾರತಿ ಉಪಸ್ಥಿತರಿದ್ದರು. 

Leave a Reply

Your email address will not be published. Required fields are marked *

You cannot copy content of this page