20ರ ಅಖಿಲ ಭಾರತ ಮುಷ್ಕರ: ನೌಕರರ ಸಂಘಟನೆಗಳಿಂದ ತಹಶೀಲ್ದಾರ್ರಿಗೆ ನೋಟೀಸ್
ಮಂಜೇಶ್ವರ: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿ ಆರೋಪಿಸಿ ಕೇಂದ್ರ ಟ್ರೇಡ್ ಯೂನಿಯನ್ಗಳು, ಸ್ವತಂತ್ರ ಫೆಡರೇಶನ್ಗಳು, ಸರ್ವೀಸ್ ಸಂಘಟನೆಗಳು ಜಂಟಿಯಾಗಿ ಈ ತಿಂಗಳ ೨೦ರಂದು ನಡೆಸುವ ಅಖಿಲ ಭಾರತ ಕೆಲಸ ಸ್ಥಗಿತ ಮುಷ್ಕರದಂಗವಾಗಿ ಅಧ್ಯಾಪಕರು, ನೌಕರರ ಆಕ್ಷನ್ ಕೌನ್ಸಿಲ್ ಆಫ್ ಸ್ಟೇಟ್ ಎಂಲಪ್ಲೋಯಿಸ್ ಆಂಡ್ ಟೀಚರ್ಸ್ ನೇತೃತ್ವದಲ್ಲಿ ಮಂಜೇಶ್ವರ ತಾಲೂಕು ತಹಶೀಲ್ದಾರ್ರಿಗೆ ಮುಷ್ಕರ ನೋಟೀಸ್ ನೀಡಲಾಯಿತು. ಈ ಬಗ್ಗೆ ನಡೆಸಿದ ಮೆರವಣಿಗೆಯಲ್ಲಿ ರತೀಶ್ ಪಿ.ಟಿ., ಯು. ಶ್ಯಾಮ್ ಭಟ್, ಎಂ.ಎಸ್. ಜೋಸ್, ಶರೀಫ್ ಪಿ.ಎ., ಎಂ. ಕೃಷ್ಣನ್, ಹಕೀಂ ಕಂಬಾರ್ ಭಾಗವಹಿಸಿದರು.