ಬೆಡ್‌ರೂಂಗೆ ಪೆಟ್ರೋಲ್ ಸುರಿದು ಕಿಚ್ಚಿಟ್ಟು ಪತ್ನಿ, ಮೊಮ್ಮಗಳನ್ನುಕೊಲೆಗೈಯ್ಯಲೆತ್ನ: ಕೃತ್ಯವೆಸಗಿದಾತ ಸುಟ್ಟಗಾಯಗಳೊಂದಿಗೆ ಆಸ್ಪತ್ರೆಯಲ್ಲಿ

ಕಾಸರಗೋಡು:   ಪ್ರತ್ಯೇಕವಾಗಿ ವಾಸಿಸುವ ಪತ್ನಿ ಹಾಗೂ  ಮೊಮ್ಮಗಳು ನಿದ್ರಿಸುತ್ತಿದ್ದ ಕೊಠಡಿಗೆ ಪೆಟ್ರೋಲ್ ಸುರಿದು ಕಿಚ್ಚಿಟ್ಟು ಅವರನ್ನು ಕೊಲೆಗೈಯ್ಯಲು ವ್ಯಕ್ತಿಯೋರ್ವ ಯತ್ನಿಸಿದ ಘಟನೆ ನಡೆದಿದೆ. ಆದರೆ ನಿದ್ರಿಸುತ್ತಿದ್ದ ಅವರಿಬ್ಬರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಇದೇ ವೇಳೆ ಕೃತ್ಯವೆಸಗಿದ ವ್ಯಕ್ತಿ ಸುಟ್ಟು ಗಾಯಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ಪಾಣತ್ತೂರು ನೆಲ್ಲಿಕುನ್ನುವಿನ ಜೋಸೆಫ್ (65) ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆಂದು ತಿಳಿದುಬಂದಿದೆ. ನಿನ್ನೆ ರಾತ್ರಿ 10.30 ರ ವೇಳೆ ಘಟನೆ ನಡೆದಿದೆ. ಈ ಘಟನೆ ಕುರಿತು ಪೊಲೀಸರು ಈರೀತಿ ತಿಳಿಸುತ್ತಿದ್ದಾರೆ.-“ಜೋಸೆಫ್ ಹಾಗೂ ಪತ್ನಿ ಸಿಸಿಲಿ …

ಸೋಲಾರ್ ಫಿಟ್ಟಿಂಗ್ ಕೆಲಸ ವೇಳೆ ತಲೆಸುತ್ತಿ ಬಿದ್ದು ಯುವಕ ಮೃತ್ಯು

ಸೀತಾಂಗೋಳಿ: ಸೋಲಾರ್ ಫಿಟ್ಟಿಂಗ್ ಕೆಲಸ ವೇಳೆ ತಲೆ ಸುತ್ತಿ ಬಿದ್ದು ಯುವಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಸೀತಾಂಗೋಳಿ ಮುಖಾರಿಕಂಡ ಕೋರಿಮೂಲೆಯ ದಿವಂಗತರಾದ ಕೇಶವ-ಜಯಂತಿ ದಂಪತಿ ಪುತ್ರ ಹರ್ಷರಾಜ್ (27) ಮೃತಪಟ್ಟ ವ್ಯಕ್ತಿ. ನೀರ್ಚಾಲು ಬಳಿಯ ಮಾಡತ್ತಡ್ಕದಲ್ಲಿ ಸಹೋದರಿ ಅರ್ಚನಾರ ಮನೆಯಲ್ಲಿ ಹರ್ಷರಾಜ್ ವಾಸಿಸುತ್ತಿದ್ದರು.  ಸೀತಾಂಗೋಳಿಯ ಅಂಗಡಿಯೊಂದರ ನೌಕರನಾಗಿದ್ದರು. ನಿನ್ನೆ ಮಧ್ಯಾಹ್ನ ೨.೩೦ರ ವೇಳೆ ನೀರ್ಚಾಲು ಬಳಿ ರತ್ನಗಿರಿಯಲ್ಲಿ ಮನೆಯೊಂದರ ಸೋಲಾರ್ ಫಿಟ್ಟಿಂಗ್ ಕೆಲಸ ವೇಳೆ ತಲೆಸುತ್ತಿ ಇವರು ಬಿದ್ದಿದ್ದರು. ಕೂಡಲೇ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೂ …

ಶಾಲಾ ಬಸ್ ಅಪಘಾತ: ತಪ್ಪಿದ ಭಾರೀ ದುರಂತ

ಕುಂಬಳೆ: ಕಳತ್ತೂರು ಸಮೀಪ ನಿನ್ನೆ ಸಂಜೆ ಶಾಲಾ ವಿದ್ಯಾರ್ಥಿಗಳನ್ನು   ಸಾಗಿಸುತ್ತಿದ್ದ ಬಸ್ ಅಪಘಾತಕ್ಕೀಡಾಗಿದ್ದು, ಅದೃಷ್ಠವಶಾತ್ ಭಾರೀ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿಹೋಗಿದೆ. ಕಳತ್ತೂರು ಸಮೀಪದ ಕಾಜೂರುಬೈಲಿಗೆ ಹೋಗುವ ರಸ್ತೆ ಬದಿ ಬಸ್ ಅಪಘಾತಕ್ಕೀಡಾಗಿದೆ. ಮುಟ್ಟಂನ ಖಾಸಗಿ ಶಾಲೆಯೊಂದರ ಬಸ್ ಅಪಘಾತಕ್ಕೀಡಾಗಿದೆ. ನಿಯಂತ್ರಣ ತಪ್ಪಿ ರಸ್ತೆಯಿಂದ ಹಿಂದಕ್ಕೆ ಬಸ್ ಚಲಿಸಿದ್ದು ಈ ವೇಳೆ ಮರವೊಂದಕ್ಕೆ ತಾಗಿ ನಿಂತಿರುವುದರಿಂದ ಭಾರೀ ಅಪಾಯ ತಪ್ಪಿದೆ. ಕೆಳಗೆ ಭಾರೀ ಕಂದಕವಿದ್ದು, ಅಲ್ಪ ದೂರದಲ್ಲಿ ಶಿರಿಯ ನದಿಯೂ ಹರಿಯುತ್ತಿದೆ. ಮರ ಇಲ್ಲದಿರುತ್ತಿದ್ದಲ್ಲಿ ಭಾರೀ ಅಪಾಯವೇ …

ಬೈಕ್ ಢಿಕ್ಕಿ ಹೊಡೆದು ಚಿಕಿತ್ಸೆಯಲ್ಲಿದ್ದ ಮುಸ್ಲಿಂ ಲೀಗ್ ಕಾರ್ಯಕರ್ತ ಮೃತ್ಯು

ಕಾಸರಗೋಡು: ಮಸೀದಿಯಲ್ಲಿ ನಮಾಜು ನಡೆಸಿದ ಬಳಿಕ ಮನೆಗೆ ನಡೆದು ಹೋಗುತ್ತಿದ್ದ ವೇಳೆ ಬೈಕ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮುಸ್ಲಿಂ ಲೀಗ್ ಕಾರ್ಯಕರ್ತ ಮೃತಪಟ್ಟರು. ಕುಂಬಳೆ ಪೇರಾಲ್‌ನ ಅಬ್ದುಲ್ಲ (66) ಎಂಬವರು ಮೃತಪಟ್ಟ ದುರ್ದೈವಿಯಾಗಿ ದ್ದಾರೆ. ಅಕ್ಟೋಬರ್ 19ರಂದು ಮಧ್ಯಾಹ್ನ 1 ಗಂಟೆಗೆ ಪೇರಾಲ್ ನಾಟೆಕಲ್ಲಿನಲ್ಲಿ ಇವರಿಗೆ ಬೈಕ್ ಢಿಕ್ಕಿ ಹೊಡೆದಿತ್ತು. ಇದರಿಂದ ಗಂಭೀರ ಗಾಯಗೊಂಡ ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ನಿಧನ ಸಂಭವಿಸಿದೆ.  ಬೈಕ್ ಚಲಾಯಿಸುತ್ತಿದ್ದ ಪೇರಾಲ್‌ನ …

ಪಿಎಂಶ್ರೀ ಯೋಜನೆ: ಸಹಿ ಹಾಕಿದ ಒಪ್ಪಂದವನ್ನು ರದ್ದುಪಡಿಸುವಂತಿಲ್ಲ-ಕೇಂದ್ರ

ತಿರುವನಂತಪುರ: ಪಿಎಂಶ್ರೀ ಯೋಜನೆಯನ್ನು ಕೇರಳದಲ್ಲಿ ಜ್ಯಾರಿಗೊಳಿಸುವ ವಿಷಯದಲ್ಲಿ ಮುಂದಿನ ಕ್ರಮ ನಿಲ್ಲಿಸುವಂತೆ ಆಗ್ರಹಿಸಿ ರಾಜ್ಯ ಸರಕಾರದ ತೀರ್ಮಾನವನ್ನು ರಾಜ್ಯ ಮುಖ್ಯ ಕಾರ್ಯಾದರ್ಶಿಯವರು ಇಂದು ಪತ್ರದ ಮೂಲಕ ಕೇಂದ್ರ ಸರಕಾರಕ್ಕೆ ವಿದ್ಯುಕ್ತವಾಗಿ ತಿಳಿಸಲಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಪಿಎಂಶ್ರೀ ಯೋಜನೆಯ ಒಪ್ಪಂದಪತ್ರಕ್ಕೆ ಸಹಿ  ಹಾಕಿರುವ ಹಿನ್ನೆಲೆಯಲ್ಲಿ ಅದನ್ನು ರದ್ದುಪಡಿಸುವ ಅಥವಾ ಮುಂದೂಡುವ ಹಾಗಿಲ್ಲವೆಂದು ಕೇಂದ್ರ ಸರಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಅಂತಹ ವ್ಯವಸ್ಥೆಗಳು ಒಪ್ಪಂದಪತ್ರದಲ್ಲಿಲ್ಲ. ಆರ್ಥಿಕ ನೆರವು ಲಭಿಸಬೇಕಾಗಿರುವ ಕೇರಳದ ಶಾಲೆಗಳ ಪಟ್ಟಿಯನ್ನು ಈಗಾಗಲೇ ತಯಾರಿಸಲಾಗಿದೆ. ಆದ್ದರಿಂದ ಈ ಯೋಜನೆಯ …

ಜಿಲ್ಲೆಯಲ್ಲಿ ಆಪರೇಷನ್ ಸೈಬರ್ ಹಂಟ್: 38 ಪ್ರಕರಣ ದಾಖಲು; 38 ಮಂದಿ ಸೆರೆ

ಕಾಸರಗೋಡು: ಸೈಬರ್ ಮೂಲಕ ನಡೆಯುತ್ತಿರುವ ಆರ್ಥಿಕ ಅಪರಾಧ ಕೃತ್ಯಗಳಲ್ಲಿ ಸಿಲುಕಿ ಕೊಂಡ ಬ್ಯಾಂಕ್ ಖಾತೆಗಳನ್ನು ಕೇಂದ್ರೀಕರಿಸಿ ಜಿಲ್ಲೆಯಲ್ಲಿ ಸೈಬರ್ ಹಂಟ್ ಎಂಬ ಹೆಸರಲ್ಲಿ ಜಿಲ್ಲೆಯಾದ್ಯಂತ ನಿನ್ನೆ ಪೊಲೀಸರು ಪರಿಶೀಲನೆ ನಡೆಸಿದರು. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿಯವರ ಮೇಲ್ನೋಟದಲ್ಲಿ ಜಿಲ್ಲಾ ಸೈಬರ್ ಕ್ರೈಂ ಬ್ರಾಂಚ್ ಪೊಲೀಸರ ಸಹಾ ಯದೊಂ ದಿಗೆ ಕಾರ್ಯಾಚರಣೆ ನಡೆಯಿತು. ಈ ಕಾರ್ಯಾಚರಣೆ ಯಲ್ಲಿ ಜಿಲ್ಲೆಯಲ್ಲಿ ಒಟ್ಟು 112 ಕೇಂದ್ರಗಳಲ್ಲಿ ಈ ಪರಿಶೀಲನೆ ನಡೆಸಲಾಯಿತು. ಇದಕ್ಕೆ ಸಂಬಂಧಿಸಿ ಒಟ್ಟು 38 …

ಕುಂಬಳೆಯಲ್ಲಿ ಟ್ರಾಫಿಕ್ ಪರಿಷ್ಕಾರ: ಪೇಟೆಯಲ್ಲಿ ತೀವ್ರಗೊಂಡ ಪ್ರತಿಭಟನೆ

ಕುಂಬಳೆ: ವ್ಯಾಪಾರಿ ಪ್ರತಿನಿಧಿಗಳ ಅಂಗೀಕಾರ ದೊಂದಿಗೆ ಕುಂಬಳೆ ಪಂಚಾಯತ್ ಪೇಟೆಯಲ್ಲಿ ಏರ್ಪಡಿಸಿದ ಟ್ರಾಫಿಕ್ ಪರಿಷ್ಕಾರದಿಂದಾಗಿ ವ್ಯಾಪಾರಿಗಳು ಹಾಗೂ ಪ್ರಯಾಣಿಕರಿಂದ ಪ್ರತಿಭಟನೆ ತೀವ್ರಗೊಂಡಿದೆ. ಕುಂಬಳೆಯ ವ್ಯಾಪಾರಿ ನೇತಾರರು ವ್ಯಾಪಾರ ವಲಯವನ್ನು  ನಾಶಗೊಳಿಸುತ್ತಿದ್ದಾರೆಂದು ಪೇಟೆಯ ವ್ಯಾಪಾರಿಗಳು ಆರೋಪಿಸುತ್ತಿದ್ದಾರೆ. ವ್ಯಾಪಾರಿಗಳು, ಸಂಘಟನಾ ಪದಾಧಿಕಾರಿಗಳ ಒತ್ತಡದಿಂದಾಗಿ ಕುಂಬಳೆ ಪಂಚಾಯತ್ ಪೊಲೀಸರ ಸಹಾಯದೊಂದಿಗೆ ಪೇಟೆಯಲ್ಲಿ ಟ್ರಾಫಿಕ್ ಪರಿಷ್ಕಾರ ಜ್ಯಾರಿಗೆ ತಂದಿರುವುದಾಗಿ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಮಾಜಿ ಅಧ್ಯಕ್ಷ ವಿಕ್ರಂ ಪೈ ತಿಳಿಸಿದ್ದಾರೆ. ಪರಿಷ್ಕಾರ ಜ್ಯಾರಿಗೆ ಬಂದಾಗ ಆ ಕುರಿತು ಪಂಚಾಯತ್ ಅಧಿಕಾರಿಗಳು ಕರೆದ  …

ಕನ್ನಡಿಗರ ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯ : ನಾಳೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹ

ಕಾಸರಗೋಡು: ಕಾಸರಗೋ ಡಿನಲ್ಲಿ ಕನ್ನಡಿಗರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಾಣಬೇಕೆಂಬ ಸಹಿತ ವಿವಿಧ ಬೇಡಿಕೆಗಳನ್ನು ಮುಂ ದಿರಿಸಿಕೊಂಡು ಕರ್ನಾಟಕ ಸಮಿತಿ,   ಕನ್ನಡ ಪರ ಸಂಘ ಸಂಸ್ಥೆಗಳ ನೇತೃತ್ವದಲ್ಲಿ  ನಾಳೆ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ಧರಣಿ ಸತ್ಯಾಗ್ರಹ ಆರಂಭಗೊಳ್ಳಲಿದೆ. ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರಾದ ಕನ್ನಡಿಗರಿಗೆ ನೀಡಲಾದ ಸವಲತ್ತುಗಳನ್ನು ಕಡಿಮೆ ಮಾಡಲಾಗಿದೆ. ಕನ್ನಡ ಮಾಧ್ಯಮ ಶಾಲೆಗಳಿಗೆ ಕನ್ನಡ ತಿಳಿಯದ ಅಧ್ಯಾಪಕರನ್ನು, ಕನ್ನಡ ಬಲ್ಲ ಎಲ್‌ಡಿ ಕ್ಲರ್ಕ್ ಹುದ್ದೆಗಳಿಗೆ ಕನ್ನಡ …

ವಿವಿಧ ಯೋಜನೆಗಳ ಉದ್ಘಾಟನೆ: ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಸಲ್ಲದು- ಕೇಂದ್ರ ಸಚಿವ ಜೋರ್ಜ್ ಕುರ‍್ಯನ್

ಕಾಸರಗೋಡು: ನಾಡಿನ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಸಲ್ಲದೆಂದೂ, ಅಂತಹ ಚಿಂತನೆ ಹೊರತುಪಡಿಸ ಬೇಕೆಂದು ಕೇಂದ್ರ ಮೀನುಗಾರಿಕೆ- ಪಶುಸಂಗೋಪನೆ- ಹೈನುಗಾರಿಕಾ ಭಿವೃದ್ಧಿ ಹಾಗೂ ಅಲ್ಪಸಂಖ್ಯಾತ ಸಹ ಸಚಿವ ಜೋರ್ಜ್ ಕುರ‍್ಯನ್ ಅಭಿಪ್ರಾ ಯಪಟ್ಟಿದ್ದಾರೆ. ಇದು ಪ್ರಧಾನಮಂತ್ರಿ ನರೇಂದ್ರ ಮೋದಿಯ ನಿಲುವು ಕೂಡಾ ಆಗಿದೆ. ಪೆರಿಯಾದಲ್ಲಿನ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯಕ್ಕಾಗಿ ಹೊಸ ಅಕಾಡೆಮಿಕ್ ಬ್ಲೋಕ್ ಕಟ್ಟಡಕ್ಕೆ ಶಿಲಾನ್ಯಾಸ ನಡೆಸಿ ಅವರು ಮಾತನಾ ಡುತ್ತಿದ್ದರು. ಪ್ರಧಾನಮಂತ್ರಿ ಜನ್‌ವಿಕಾಸ್ ಕಾರ್ಯಕ್ರಮ್ (ಪಿಎಂಜಿವಿಕೆ) ಯೋಜನೆಯಲ್ಲಿ ಒಳಪಡಿಸಿ ಕೇಂದ್ರ ಅಲ್ಪಸಂಖ್ಯಾತ ಸಚಿವಾಲಯ ಮಂಜೂರು ಮಾಡಿರುವ ೫೨.೬೮ …

ಮಕ್ಕಳನ್ನು ಉಪಯೋಗಿಸಿ ಭಿಕ್ಷಾಟನೆ ಮಹಿಳೆಗೆ 1 ಲಕ್ಷ ರೂ. ಜುಲ್ಮಾನೆ, ಸಜೆ

ಕಾಸರಗೋಡು: ಮೂವರು ಮಕ್ಕಳನ್ನು ಉಪಯೋಗಿಸಿ ಭಿಕ್ಷಾಟನೆ ನಡೆಸಿದ ಪ್ರಕರಣದ ಆರೋಪಿಯಾ ಗಿರುವ ತಮಿಳುನಾಡಿನ ಮಹಿಳೆಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ  (ಪ್ರಥಮ)ದ ನ್ಯಾಯಾ ಧೀಶರಾದ ಟಿ.ಎಚ್. ರಜಿತ ಒಂದು ಲಕ್ಷರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಇದರ ಹೊರತಾಗಿ ನ್ಯಾ ಯಾಲಯದ ನಿನ್ನೆಯ ಕಲಾಪ ಮುಗಿ ಯುವ ತನಕ  ಸಜೆಯನ್ನೂ ವಿಧಿಸಲಾಗಿದೆ. ತಮಿಳುನಾಡು ಚೆನ್ನೈ ಕಲ್ಲಕುರುಚ್ಚಿ ಕಟ್ಟುಕ ಪಾಳಯಂ ನಿವಾಸಿ ಮಲ್ಲಿಕಾ (55) ಎಂಬಾಕೆಗೆ ಈ ಶಿಕ್ಷೆ ವಿಧಿಸ ಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ 15 …