ಕೊಳವೆ ಬಾವಿತೋಡಲಿರುವ ಪೈಪ್ ಇಳಿಸುತ್ತಿದ್ದ ವೇಳೆ ಜೀಪು ಹಿಂದಕ್ಕೆ ಚಲಿಸಿ ಓರ್ವ ಕಾರ್ಮಿಕ ಮೃತ್ಯು

ಕಾಸರಗೋಡು: ಕೊಳವೆ ಬಾವಿ ತೋಡಲು  ಪೈಪ್ ಇಳಿಸುತ್ತಿದ್ದ ಜೀಪು ಹಿಂದಕ್ಕೆ ಸಾಗಿ ಓರ್ವ ಕಾರ್ಮಿಕ ಮೃತಪಟ್ಟ ಘಟನೆ ಸಂಭವಿಸಿದೆ. ತಮಿಳುನಾಡಿನ ನಾಮಕ್ಕಲ್ ಸೀತಾರಾಮ ಪಾಳಯಂ ಮಾಂಕುಟ್ಟಿ ಪಾಳಯದ ರಾಜಗೋಪಾಲನ್ ಎಂಬವರ ಪುತ್ರ ಮುರಳಿ ರಾಜಗೋಪಾಲ್ (40) ಮೃತಪಟ್ಟ ವ್ಯಕ್ತಿ. ನಿನ್ನೆ ರಾತ್ರಿ 11 ಗಂಟೆ ವೇಳೆ ಚಿಟ್ಟಾರಿಕ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಮಣಾಟಿಕಲವಲ ಎಂಬಲ್ಲಿ ದುರ್ಘಟನೆ ಸಂಭವಿಸಿದೆ. ಕೊಳವೆಬಾವಿ ತೋಡಲಿರುವ ಪೈಪುಗಳನ್ನು ಜೀಪಿನಲ್ಲಿ ಸ್ಥಳಕ್ಕೆ ತಲುಪಿಸಲಾಗಿತ್ತು. ಇಳಿಜಾರು ಸ್ಥಳದಲ್ಲಿ  ಜೀಪು ನಿಲ್ಲಿಸಿ ಪೈಪುಗಳನ್ನು ಇಳಿಸುತ್ತಿದ್ದ ವೇಳೆ ಹಿಂದಕ್ಕೆ …

ಚುನಾವಣೆ : ಎಕೆಎಂ ಅಶ್ರಫ್ ಕಾರ್ನರ್ ಸಭೆಗಳಲ್ಲಿ, ಕೆ. ಸುರೇಂದ್ರನ್ ಮಂಗಲ್ಪಾಡಿ ಪಂ. ಪರ್ಯಟನೆ, ಕೆ.ಆರ್. ಜಯಾನಂದರಿಂದ ಗಣ್ಯ ವ್ಯಕ್ತಿಗಳ ಭೇಟಿ

ಮಂಜೇಶ್ವರ: ಮತದಾನದ ದಿನ ಸಮೀಪಿಸುತ್ತಿರುವಂತೆ ಮಂಜೇಶ್ವರ ಮಂಡಲದ ವಿವಿಧ ಪಕ್ಷಗಳ ಅಭ್ಯರ್ಥಿಗಳ ಚುನಾವಣಾ ಪ್ರಚಾರ ಭರದಿಂದ ಮುಂದುವರಿಯುತ್ತಿದೆ. ಯುಡಿಎಫ್‌ನ ಅಭ್ಯರ್ಥಿ ಎಕೆಎಂ ಅಶ್ರಫ್ ನಿನ್ನೆ ಮೊಗ್ರಾಲ್‌ನಲ್ಲಿ ಕಾರ್ಯಕರ್ತರ ಜೊತೆ ರ‍್ಯಾಲಿ ನಡೆಸಿ ಪ್ರಚಾರ ಕೈಗೊಂಡರು. ಮೀಂಜ ಪಂಚಾಯತ್‌ನ ಗಾಂಧಿನಗರದಲ್ಲಿ ಕುಟುಂಬ ಸಭೆಯಲ್ಲಿ ಭಾಗವಹಿಸಿದರು. ಇಂದು ಬೆಳಿಗ್ಗೆ ಕುಂಬಳೆ ಪಂಚಾಯತ್‌ನ ಮುಳಿಯಡ್ಕದಲ್ಲಿ ಕಾರ್ನರ್ ಸಭೆ, ಸಂಜೆ ೪ಕ್ಕೆ ಆರಿಕ್ಕಾಡಿಯಲ್ಲಿ ಪರ್ಯಟನೆ ಕೊನೆಗೊಳ್ಳಲಿದೆ. 3 ಗಂಟೆಗೆ ಉಪ್ಪಳ ಬಪ್ಪಾಯಿತೊಟ್ಟಿಯಲ್ಲಿ ಕುಟುಂಬಸಭೆ ನಡೆಯಲಿದ್ದು, ಕರ್ನಾಟಕ ಸಚಿವ ಜಮೀರ್ ಅಹಮ್ಮದ್ ಉದ್ಘಾಟಿಸುವರು. ಬಿಜೆಪಿ …

ಭರದಿಂದ ಮುಂದುವರಿಯುತ್ತಿರುವ ಅಭ್ಯರ್ಥಿಗಳ ಪರ್ಯಟನೆ

ಕಾಸರಗೋಡು: ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಪಕ್ಷಗಳ ಚುನಾವಣೆ ಪ್ರಚಾರ ಭರದಿಂದ ಮುಂದುವರಿಯುತ್ತಿದೆ. ಇದರಂತೆ ಯುಡಿಎಫ್ ಉಮೇದ್ವಾರ ಕಲ್ಲಟ್ರ ಮಾಹಿನ್ ಕಾರಡ್ಕ ಮತ್ತು ಬದಿಯಡ್ಕ ಪಂಚಾಯತ್‌ಗಳಲ್ಲಿ ನಿನ್ನೆ ಕಾರ್ನರ್ ಸಭೆ ನಡೆಸಿದರು. ಕಾರಡ್ಕ ಪಂಚಾಯತ್‌ನ ಕುಂಟಾರಿನಲ್ಲಿ ನಡೆದ ಕಾರ್ನರ್ ಸಭೆಯನ್ನು ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸಿ ದರು. ಪಂಚಾಯತ್ ಚುನಾವಣಾ ಸಮಿತಿ ಅಧ್ಯಕ್ಷ ಪುರುಷೋತ್ತಮನ್ ಕಾರಡ್ಕ ಅಧ್ಯಕ್ಷತೆ ವಹಿಸಿದರು. ಮುಳ್ಳೇರಿಯದಲ್ಲಿ ಬಳಿಕ ನಡೆದ ಯುಡಿಎಫ್ ಚುನಾವಣಾ ಪ್ರಚಾರ ಸಭೆಯನ್ನು ಮುಸ್ಲಿಂ ಲೀಗ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಎಂ.ಎ …

ಭಾರತಕ್ಕೆ ಕಾಶ್ಮೀರ ಮುಕುಟವಾದರೆ ಕೇರಳದ ಮುಕುಟ ಕಾಸರಗೋಡು: ಇಲ್ಲಿ ಬಿಜೆಪಿ ಗೆಲ್ಲಬೇಕು-ಕೇಂದ್ರ ಸಚಿವ ಸುರೇಶ್‌ಗೋಪಿ

ಮುಳ್ಳೇರಿಯ/ಕಾಸರಗೋಡು: ಭಾರತಕ್ಕೆ ಕಾಶ್ಮೀರ ಮುಕುಟವಾದರೆ ಕೇರಳಕ್ಕೆ ಕಾಸರಗೋಡು  ಮುಕುಟವಾಗಿದೆ. ಆದ್ದರಿಂದ ಇಲ್ಲಿ ಬಿಜೆಪಿ ಗೆಲ್ಲಬೇಕೆಂದು ಕೇಂದ್ರ ಸಚಿವ ಸುರೇಶ್‌ಗೋಪಿ ಹೇಳಿದ್ದಾರೆ. ಮುಳ್ಳೇರಿಯ ಮತ್ತು ಕಾಸರಗೋಡು ಕಸಬಾ ಕಡಪ್ಪುರ  ಎಂಬೆಡೆಗಳಲ್ಲಾಗಿ ನಿನ್ನೆ ನಡೆದ ಎನ್‌ಡಿಎ ಚುನಾವಣಾ ಪ್ರಚಾರ ಸಭೆಗಳಲ್ಲಿ ಅವರು ಭಾಗವಹಿಸಿ ಮಾತನಾಡಿದರು. ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಎನ್‌ಡಿಎ ಮಹಿಳಾ ಅಭ್ಯರ್ಥಿಯಾದ ಎಂ.ಎಲ್. ಅಶ್ವಿನಿ ಗೆದ್ದು ಬರಬೇಕು. ಅದಕ್ಕೆ  ತಮ್ಮ ಅಮೂಲ್ಯವಾದ ಮತಗಳನ್ನು ಅವರಿಗೆ ನೀಡಬೇಕೆಂದು ಸಚಿವರು ವಿನಂತಿಸಿಕೊಂಡರು. ಕೇಂದ್ರ ಸರಕಾರದ ಯೋಜನೆಗಳನ್ನು ಕೇರಳದಲ್ಲಿ ಜ್ಯಾರಿಗೊಳಿಸದೆ ರಾಜ್ಯ ಸರಕಾರ …

ಚೇವಾರು: ಸುಂದರಿ ಕಾಮತ್ ನಿಧನ

ಪೈವಳಿಕೆ: ಪೈವಳಿಕೆ ಪಂಚಾಯತ್ ಮಾಜಿ ಉಪಾಧ್ಯಕ್ಷ ದಿ| ಚೇವಾರು ಜನಾರ್ದನ ಕಾಮತ್‌ರ ಪತ್ನಿ, ಕೊಡುಗೈ ದಾನಿ ಸುಂದರಿ ಕಾಮತ್ (90) ಇಂದು ಮುಂಜಾನೆ ನಿಧನ ಹೊಂದಿದರು. ಮೃತರು ಮಕ್ಕಳಾದ ದಯಾನಂದ ಕಾಮತ್ (ಉದ್ಯಮಿ ಬೆಂಗಳೂರು), ವಿಮಲ ಕಾಮತ್, ಸರಳ ಕಾಮತ್, ಚಂದ್ರಪ್ರಭ ಕಾಮತ್, ಮಲ್ಲಿಕ ಕಾಮತ್, ಅಳಿಯಂದಿರಾದ ರಾಮಕೃಷ್ಣ ನಾಯಕ್ (ವಿಟ್ಲ ಎಸ್‌ಸಿಡಿಸಿಸಿ ಬ್ಯಾಂಕ್ ನಿವೃತ್ತ ಮೆನೇಜರ್), ಪುರುಷೋತ್ತಮ ನಾಯಕ್ (ನಿವೃತ್ತ ಕ್ಯಾಂಪ್ಕೋ ಅಧಿಕಾರಿ), ಗುರುಪಾದ್ (ನಿವೃತ್ತ ಕಾಸರಗೋಡು ತಹಶೀಲ್ದಾರ್), ಹರಿಯಣ್ಣ ನಾಯಕ್ (ನಿವೃತ್ತ ಶಿಕ್ಷಕ) ಹಾಗೂ …

ಸಾಮರಸ್ಯಕ್ಕೆ ಮಾದರಿಯಾದ ತೂಮಿನಾಡು: ಮುಸ್ಲಿಂ ಯುವಕರಿಂದ ಮಜ್ಜಿಗೆ ವಿತರಣೆ

ಮಂಜೇಶ್ವರ: ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟಾಗುವ ರೀತಿಯಲ್ಲಿ ವಿವಿಧ ಕಡೆಗಳಲ್ಲಿ ಕಂಡು ಬರುತ್ತಿರುವ ಸನ್ನಿವೇಶದಲ್ಲಿ ತೂಮಿನಾಡಿನ ಮುಸ್ಲಿಂ ಯುವಕರು ಮಾನವೀಯತೆ, ಸೌಹಾರ್ದತೆ ಮೆರೆದಿದ್ದಾರೆ. ತೂಮಿನಾಡು ಬ್ರಹ್ಮಶ್ರೀ ಮೊಗೇರ ಮಹಾಕಾಳಿ ದೈವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಹೊರೆಕಾಣಿಕೆ ಮೆರವಣಿಗೆಯಲ್ಲಿ ಭಾಗವಹಿಸಿದ ಭಕ್ತರಿಗೆ ಮಜ್ಜಿಗೆ ವಿತರಿಸುವ ಮೂಲಕ ಯುವಕರು ಕೋಮು ಸೌಹಾರ್ದತೆ ಮೆರೆದಿದ್ದಾರೆ. ನಿನ್ನೆ ಆರಂಭಗೊಂಡ ಬ್ರಹ್ಮಕಲಶ ಹಾಗೂ ವಾರ್ಷಿಕ ನೇಮೋತ್ಸವದ ಹಿನ್ನೆಲೆಯಲ್ಲಿ ಹೊರೆಕಾಣಿಕೆ ಮೆರವಣಿಗೆ ಆಯೋಜಿಸಲಾಗಿತ್ತು. ಮುಸ್ಲಿಂ ಯುವಕರ ಈ ಮಾನವೀಯತೆಯ ಸಂದೇಶವನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ. ದೈವಸ್ಥಾನ ಸಮಿತಿ ಕೂಡಾ …

ಪುಳಿಕುತ್ತಿ ದೈವಸ್ಥಾನ ನೇಮ: ಸಾಧಕರಿಗೆ ಸನ್ಮಾನ

ಮಂಗಲ್ಪಾಡಿ: ಪುಳಿಕುತ್ತಿ ಐಲ ಬ್ರಹ್ಮಶ್ರೀ ಮೊಗೇರ ಮಹಾಕಾಳಿ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವದಂಗವಾಗಿ ಸಭೆ, ಸಾಧಕರಿಗೆ ಸನ್ಮಾನ ಜರಗಿತು. ವಾರ್ಡ್ ಪ್ರತಿನಿಧಿ ವಸಂತ ಕುಮಾರ್ ಮಯ್ಯ ಅಧ್ಯಕ್ಷತೆ ವಹಿಸಿದರು. ಧಾರ್ಮಿಕ ಮುಂದಾಳು ಕೃಷ್ಣ ಶಿವಕೃಪ ಕುಂಜತ್ತೂರು ಭಾಷಣ ಮಾಡಿದರು. ಗುರಿಕಾರ ರಾಮಕೃಷ್ಣ ಪುಳಿಕುತ್ತಿ, ಕರ್ನಾಟಕ ಮಾಜಿ ಸಚಿವ ಅಂಗಾರ, ವಿಶ್ವಹಿಂದೂ ಪರಿಷತ್ ಮುಖಂಡ ಜಯದೇವ ಖಂಡಿಗೆ, ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಉದ್ಯಮಿ ಮೋಹನ್ ಶೆಟ್ಟಿ ತೂಮಿನಾಡು, ಪಂಚಾಯತ್ ಮಾಜಿ ಸದಸ್ಯೆ ಸುಧಾ ಗಣೇಶ್, ಗೋಪಾಲ ಪುಳಿಕುತ್ತಿ ಉಪಸ್ಥಿತರಿದ್ದರು. …

ಇಚ್ಲಂಗೋಡು ಇಸ್ಲಾಮಿಯ ಎಎಲ್‌ಪಿ ಶಾಲೆ 80ನೇ ವಾರ್ಷಿಕಾಚರಣೆ: ವಿವಿಧ ಕಾರ್ಯಕ್ರಮ ನಾಳೆ

ಕುಂಬಳೆ: ಎಂಟು ದಶಕದ ಶಿಕ್ಷಣ ಪರಂಪರೆಯಿರುವ ಇಚ್ಲಂಗೋಡು ಇಸ್ಲಾಮಿಯ ಎಎಲ್‌ಪಿ ಶಾಲೆಯ 80ನೇ ವಾರ್ಷಿಕಾಚರಣೆ ನಾಳೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಕುಂಬಳೆಯಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಪದಾಧಿಕಾರಿಗಳು ತಿಳಿಸಿದ್ದಾರೆ. ನಾಳೆ ಅಪರಾಹ್ನ 2 ಗಂಟೆಯಿಂದ ಬೀರೊಳಿಕೆ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಇದರಂಗ ವಾಗಿ 80 ವರ್ಷದ ಇತಿಹಾಸ ದಾಖಲಿ ಸಿದ ಸ್ಮರಣ ಸಂಚಿಕೆ ಬಿಡುಗಡೆಗೊಳಿ ಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಮೆನೇಜರ್ ಮೊಹಮ್ಮದ್ ಅನ್ಸಾರಿ ಶೆರುಳ್, ವಿದ್ಯಾಲಯದ ಕಿಚನ್, ಸ್ಟೋರ್ ನಿರ್ಮಾಣಕ್ಕೆ ನೇತೃತ್ವ ನೀಡಿದ ಕಾಂಟ್ರಾಕ್ಟರ್ ಸಾಬಿರ್, ತಾರನಾಥ್ …

ಯುವತಿಗೆ ಲೈಂಗಿಕ ದೌರ್ಜನ್ಯಕ್ಕೆತ್ನಿಸಿದ ತಂಡದ ಮೇಲೆ ಗುಂಡು ಹಾರಾಟ: ಓರ್ವ ಸಾವು

ಮುಂಬೈ: ಯುವತಿಗೆ ಲೈಂಗಿಕ  ದೌರ್ಜನ್ಯಕ್ಕೆ ಯತ್ನಿಸಿದ ತಂಡದ ಮೇಲೆ ನಡೆದ ಗುಂಡು ಹಾರಾಟದಲ್ಲಿ ಓರ್ವ ಮೃತಪಟ್ಟ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.  ಇಬ್ಬರು ಗಾಯಗೊಂಡಿದ್ದಾರೆ.  ವಲಸೆ ಕಾರ್ಮಿಕರು  ಅತೀ ಹೆಚ್ಚಿರುವ ಸ್ಥಳದಲ್ಲಿ ಈ ಘಟನೆ ನಡೆದಿದೆ.   ಅಕ್ಬರ್ ಅಹಮ್ಮದ್ ಎಂಬಾತ ಮೃತ ವ್ಯಕ್ತಿಯಾಗಿದ್ದಾನೆಂದು ಗುರುತಿಸಲಾಗಿದೆ. ಈ ಘಟನೆಗೆ ಸಂಬಂಧಿಸಿ ಕೇರಳೀಯನಾದ ಜಯನ್ ಶಿವಾನಂದನ್ ನಾಯರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.  ಗಾಯಗೊಂಡ ಇಬ್ಬರನ್ನು ಆಸ್ಪತ್ರೆಯಲ್ಲಿ ದಾಖಲಿಸ ಲಾಗಿದೆ. ಜಯನ್ ಕೇರಳೀಯ ನಾಗಿದ್ದರೂ ಜನಿಸಿ ಬೆಳೆದಿರುವುದು ಮಹಾರಾಷ್ಟ್ರದಲ್ಲಾಗಿದೆ. ತಾನು ಸಹೋದರಿಯಂತೆ …

ಎಲ್‌ಡಿಎಫ್‌ನ ಬೃಹತ್ ಫ್ಲೆಕ್ಸ್ ನಾಶ ಪ್ರಕರಣ: ಅಪ್ರಾಪ್ತ ಸೇರಿ ಐದು ಮಂದಿ ಸೆರೆ

ಕಾಸರಗೋಡು: ಪೊಯಿನಾಚಿ ಮೈಲಾಟಿಯ ರಾಷ್ಟ್ರೀಯ ಹೆದ್ದಾರಿ ಬದಿ ಖಾಸಗಿ ಹಿತ್ತಿಲಲ್ಲಿ ಎಡರಂಗದ ರಾಜ್ಯ ಸಮಿತಿ ಸ್ಥಾಪಿಸಿದ ಬೃಹತ್ ಫ್ಲೆಕ್ಸ್ ಬೋರ್ಡನ್ನು ನಾಶಪಡಿಸಿದ ಪ್ರಕರಣದಲ್ಲಿ ಅಪ್ರಾಪ್ತ ಸೇರಿ ಐದು ಮಂದಿಯನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ. ಪನೆಯಾಲ್, ಚೌಕಿ, ಪೊನ್ನಂಬಾರ ನಿವಾಸಿ ಗುರುಪ್ರಸಾದ್ (28), ಚೌಕಿಯ ಹರ್ಷಿತ್ (24), ಮಿಥುನ್‌ರಾಜ್ (25), ಗುರುವಯ್ಯ (25), ಪೃಥ್ವಿರಾಜ್ (22), ಹಾಗೂ 17ರ ಹರೆಯದ ಅಪ್ರಾಪ್ತ ಸೆರೆಯಾದವರು. ಒಂದು ವಾರದ ಹಿಂದೆ ಘಟನೆ ನಡೆದಿದೆ. ಸಿಪಿಎಂ ಪನಯಾಲ್ ಲೋಕಲ್ ಕಾರ್ಯದರ್ಶಿ ಒ. ನಾರಾಯಣನ್ …