ಪೊಯಿನಾಚಿ ಮಂಡಲಿಪ್ಪಾರದಲ್ಲಿ ನಿಗೂಢವಾಗಿ ಯುವಕನ ಮೃತದೇಹ ಪತ್ತೆ: ಕೊಲೆಯೆಂದು ಶಂಕೆ

ಕಾಸರಗೋಡು: ಮೇಲ್ಪರಂಬ ಪೊಲೀಸ್ ಸ್ಟೇಶನ್ ವ್ಯಾಪ್ತಿಯ ಪೊಯಿನಾಚಿ, ಮಂಡಲಿಪ್ಪಾರದಲ್ಲಿ ಯುವಕನೋರ್ವ ನಿಗೂಢವಾದ ಸನ್ನಿವೇಶದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಕೊಲೆಕೃತ್ಯವೆಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ. ಚಟ್ಟಂಚಾಲ್ ಮಂಡಲಿಪ್ಪಾರದ ಅಬ್ದುಲ್ ರಹ್‌ಮಾನ್‌ರ ಪುತ್ರ ಶಬೀರ್ (40) ಮೃತಪಟ್ಟವರು. ಇಂದು ಬೆಳಿಗ್ಗೆ ಪೊಯಿನಾಚಿ ಮಂಡಲಿಪ್ಪಾರ ರಸ್ತೆಯ ಞಾನಿಕ್ಕಲ್ ಸೇತುವೆ ಅಡಿಯಲ್ಲಿ ಮೃತದೇಹ ಕಂಡು ಬಂದಿದೆ. ಅಂಗಿ ಮಾತ್ರವೇ ದೇಹದಲ್ಲಿದ್ದು, ಗಾಯಗಳು ಕಂಡುಬಂದಿದೆ. ಇದು ಸಾವಿನಲ್ಲಿ ಸಂಶಯ ಉಂಟುಮಾಡಿದೆ. ಸಮೀಪದಲ್ಲೇ ರಕ್ತದ ಕಲೆಗಳು ಕಂಡು ಬಂದಿರುವುದಾಗಿ ಪೊಲೀಸರು …

ಅರಣ್ಯದಲ್ಲಿ ಜೇನುತುಪ್ಪ ಸಂಗ್ರಹಿಸುವ ವೇಳೆ ಮರದಿಂದ ಬಿದ್ದು ಯುವಕ ಸಾವು

ಕಾಸರಗೋಡು: ಜೇನುತುಪ್ಪ ಸಂಗ್ರಹಿಸಲು ಬೃಹತ್ ಮರಕ್ಕೇರಿದ  ಯುವಕ  ಕೆಳಕ್ಕೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ವೆಳ್ಳರಿಕುಂಡ್  ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಕೊನ್ನಕ್ಕಾಡ್ ಕೋಟಚ್ಚೇರಿ ಉನ್ನತಿಯಲ್ಲಿ ವಾಸಿಸುತ್ತಿರುವ ಮೂಲತಃ ಕೊಡಗು ಜಿಲ್ಲೆಯ ತನ್ನಿಮಾಣಿ ಗ್ರಾಮದ ತಲಕಾವೇರಿ  ಕೆನ್‌ಮೇಸ್ತ್ರಿ ಮೊಟ್ಟ ನಿವಾಸಿ ಎಚ್.ಪಿ ಪ್ರಕಾಶ್ (33) ಸಾವನ್ನಪ್ಪಿದ ದುರ್ದೈವಿ. ಇವರು ದಟ್ಟಾರಣ್ಯದಲ್ಲಿ ಜೇನುತುಪ್ಪ ಸಂಗ್ರಹಿಸುವ ತಂಡದ ಸದಸ್ಯರಾ ಗಿದ್ದಾರೆ. ಆಹಾರ ಸಾಮಗ್ರಿಗಳೊಂದಿಗೆ ದಟ್ಟಾರಣ್ಯಗಳಿಗೆ ಸಾಗಿ ಅಲ್ಲೇ  ಟೆಂಟ್ ನಿರ್ಮಿಸಿ ದಿನಗಳ ತನಕ ಅಲ್ಲೇ ಉಳದು ಜೇನುತುಪ್ಪ ಸಂಗ್ರಹಿಸುವುದು ಈ ತಂಡದ …

ವ್ಯಕ್ತಿಯನ್ನು ಕಾರಿನಲ್ಲಿ ಅಪಹರಿಸಿ ನಗ್ನ ಫೋಟೋ ತೆಗೆದು ಬೆದರಿಸಿ ಹಣ ಪಡೆಯಲೆತ್ನ:ನಾಲ್ಕು ಮಂದಿ ವಿರುದ್ಧ ಪ್ರಕರಣ ದಾಖಲು

ಕಾಸರಗೋಡು: ಕೂಡ್ಲು ನಿವಾಸಿಯೋರ್ವನನ್ನು ಕಾರಿನಲ್ಲಿ ಅಪಹರಿಸಿಅವರ ನಗ್ನ ಫೋಟೋ ತೆಗೆದು ಹಣ ನೀಡುವಂತೆ ಬೆದರಿಸಿ ಹಲ್ಲೆ ನಡೆಸಿರುವುದಾಗಿ ಆರೋಪಿ ಸಲಾಗಿದೆ. ಇದರಂತೆ ಕಾಸರಗೋಡು ಪೊಲೀಸರು ನಾಲ್ವರ ವಿರುದ್ಧ  ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೂಡ್ಲು ಬಳ್ಳಿಮೊಗರು ಹೌಸ್‌ನ ಸುರೇಶ್ ನಾಯ್ಕ (57) ಎಂಬವರು ನೀಡಿದ ದೂರಿನಂತೆ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾರ್ಚ್ 31ರಂದು ರಾತ್ರಿ ಕೂಡ್ಲು ಎರಿಯಾಲ್ ರಸ್ತೆ ಬಳಿಯಿಂದ ಕಂಡರೆ ಗುರುತುಹಚ್ಚಲು ಸಾಧ್ಯವಾಗುವ ಇಬ್ಬರೂ ಸೇರಿದಂತೆ ನಾಲ್ವರ ತಂಡ ತನ್ನನ್ನು ಕಾರಿನಲ್ಲಿ ಅಪಹರಿಸಿ ಕಾಸರಗೋಡು ವೆಂಕಟ್ರಮಣ ದೇವಸ್ಥಾನ …

ನೀರ್ಚಾಲು ಮಹಾಜನ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿಯಿಂದ ನೂತನ ವಿಶ್ವದಾಖಲೆ

ನೀರ್ಚಾಲು: ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಶ್ರಾವ್ಯ ಕೆ.ಎಸ್. ನೂತನ ವಿಶ್ವದಾಖಲೆಯೊಂದನ್ನು ನಿರ್ಮಿಸಿದ್ದಾಳೆ. ಕಣ್ಣಿಗೆ ಬಟ್ಟೆಕಟ್ಟಿಕೊಂಡು 5 ನಿಮಿಷ 8 ಸೆಕೆಂಡ್‌ಗಳಲ್ಲಿ 500 ಮೀಟರ್ ತನಕ ಈಕೆ ಸೈಕಲ್ ಓಡಿಸಿ ಈ ನೂತನ ವಿಶ್ವದಾಖಲೆ ನಿರ್ಮಿಸಿದ್ದಾಳೆ. ಕಳೆದ ಮಾರ್ಚ್ 19ರಂದು ಈಕೆ ಈ ಸಾಧನೆ ಮಾಡಿದ್ದಾಳೆ. 2025 ಮಾರ್ಚ್ 9ರಂದು ಈಕೆ ಬೇರೊಂದು ವಿಶ್ವದಾಖಲೆಯನ್ನೂ ನಿರ್ಮಿಸಿದ್ದಳು. 62 ಪದಗಳನ್ನು ಮತ್ತು ಅರ್ಥಪೂರ್ಣವಾದ ವಾಕ್ಯಗಳನ್ನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೇವಲ …

ಹಲವಾರು ಕುಟುಂಬಗಳು ಸಂಕಷ್ಟದಲ್ಲಿ: ಬಾವಿ, ಹೊಳೆಗಳಲ್ಲಿ ಕಡಿಮೆಯಾಗುತ್ತಿರುವ ನೀರಿನ ಮಟ್ಟ; ಮಂಗಲ್ಪಾಡಿ ಪಂ. ವ್ಯಾಪ್ತಿಯಲ್ಲಿ 4 ದಿನಕ್ಕೊಮ್ಮೆ ನಳ್ಳಿನೀರು ವಿತರಣೆ

ಉಪ್ಪಳ: ಹವಾಮಾನದಲ್ಲಿ ಬಿಸಿ ಏರುತ್ತಿರುವಂತೆಯೇ ಕುಡಿಯುವ ನೀರಿಗೆ ಕ್ಷಾಮ ತಲೆದೋರಲು ಆರಂಭ ವಾಗಿದೆ. ಪ್ರತೀ ವರ್ಷ ಬೇಸಿಗೆಕಾಲದಲ್ಲಿ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿ ಯಲ್ಲಿ ಕುಡಿಯುವ ನೀರು ಕ್ಷಾಮ ವ್ಯಾಪಕವಾಗುತ್ತಿದ್ದು ಈ ಬಾರಿ ಈಗಲೇ ನೀರಿನ ಕ್ಷಾಮ ಕಂಡುಬರುತ್ತಿದೆ. ಬಾವಿ ಹಾಗೂ ಹೊಳೆಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಉಪ್ಪಳ ಹೊಳೆಯ ಕೊಡಂಗೆಯಲ್ಲಿ ನಿರ್ಮಿಸಿರುವ ಕುಡಿಯುವ ನೀರು ಯೋಜನೆಯ ಬಾವಿಯಲ್ಲಿ ನೀರು ಕಡಿಮೆಯಾಗಿರು ವುದು ಪೈಪ್ ಮೂಲಕ ವಿತರಣೆಗೆ ತೊಡಕಾಗಿದೆ. ಇದುವರೆಗೆ ಎರಡು ದಿನಕ್ಕೊಮ್ಮೆ ವಿತರಿಸಲಾಗುತ್ತಿದ್ದ ಕುಡಿಯುವ ನೀರು ಈಗ …

ಬೋವಿಕ್ಕಾನ ಪೇಟೆಯಲ್ಲಿ ಕಟ್ಟಿ ನಿಲ್ಲುವ ನೀರಿಗೆ ಪರಿಹಾರವಾಗಲಿದೆ: 85 ಲಕ್ಷ ರೂ. ವೆಚ್ಚದಲ್ಲಿ ಆರಂಭಿಸಿದ ಕಾಮಗಾರಿ ಮುಂದಿನ ತಿಂಗಳು ಪೂರ್ತಿ ನಿರೀಕ್ಷೆ

ಬೋವಿಕ್ಕಾನ: ಬೋವಿಕ್ಕಾನ ಪೇಟೆಯಲ್ಲಿ ನೀರು ಕಟ್ಟಿ ನಿಂತು ಸಂಚಾರಕ್ಕೆ ಸಮಸ್ಯೆಯಾಗುತ್ತಿರುವುದಕ್ಕೆ ಪರಿಹಾರವಾಗಿ ನವೀಕರಣ ಕಾಮಗಾರಿಗಳು ಆರಂಭಗೊಂಡಿದ್ದು, ಮಳೆ ಬಿರುಸಾಗುವ ಮೊದಲೇ ಪೂರ್ತಿಗೊಳ್ಳುವ ಸಾಧ್ಯತೆ ಇದೆ. ಮುಳಿಯಾರು ಪಂಚಾಯತ್‌ನ ಪ್ರಧಾನ ಕೇಂದ್ರವಾದ ಬೋವಿಕ್ಕಾನ ಪೇಟೆಯಲ್ಲಿ ಸಣ್ಣ ಮಳೆ ಸುರಿದರೂ ಕಟ್ಟಿ ನಿಲ್ಲುವ ಮಳೆ ನೀರಿನಿಂದ ಪ್ರಯಾಣಿಕರಿಗೆ, ವ್ಯಾಪಾರಿಗಳಿಗೆ ಸಂಕಷ್ಟವಾಗುತ್ತಿತ್ತು. ಚೆರ್ಕಳ- ಜಾಲ್ಸೂರು ಅಂತಾ ರಾಜ್ಯ ಹೆದ್ದಾರಿಯ ಪ್ರಮುಖ ಪೇಟೆಗಳಲ್ಲೊಂದಾದ ಬೋವಿಕ್ಕಾನದಲ್ಲಿ ಮೂಲಭೂತ ಸೌಕರ್ಯಗಳ ಸಹಿತದ ಪರಿಮಿತಿಗಳಿಂದ ಪೇಟೆಯಲ್ಲಿ ತೊಂದರೆ ಸೃಷ್ಟಿಯಾಗಿತ್ತು. ಈಗ ೮೫ ಲಕ್ಷ ರೂ. ವೆಚ್ಚದಲ್ಲಿ ಮೋರಿಸಂಕ …

ಕೇರಳದಲ್ಲೂ ಜನರು ಬದಲಾವಣೆ ಆಗ್ರಹಿಸುತ್ತಿದ್ದಾರೆ- ಸುಬ್ರಹ್ಮಣ್ಯ ಭಟ್ ಕಜಂಪಾಡಿ

ಕಾಸರಗೋಡು: ಕೇರಳದ ಜನರು ರಾಜಕೀಯ ಬದಲಾವಣೆ ಆಗ್ರಹಿಸುತ್ತಿದ್ದಾರೆ ಎಂದು ಈ ಬಾರಿಯ ಚುನಾವಣಾ ಫಲಿತಾಂಶ ಅದರ ಪ್ರತಿಫಲನವಾಗಲಿದೆ ಎಂದು ಆರ್‌ಎಸ್‌ಎಸ್ ಮುಖಂಡ ಸುಬ್ರಹ್ಮಣ್ಯ ಭಟ್ ಕಜಂಪಾಡಿ ನುಡಿದರು. ಕಾಸರಗೋಡು ವಿಧಾನಸಭಾ ಮಂಡಲ ಚುನಾವಣೆಯ ಅಂಗವಾಗಿ ಬಿಜೆಪಿ ಎನ್‌ಡಿಎ ಪದಾಧಿಕಾರಿಗಳಿಗೆ, ಸಂಘದ ವಿವಿಧ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಲು ಏರ್ಪಡಿಸಿದ ಸಭೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ದೇಶದ ಅಭಿವೃದ್ಧಿಗೆ ಕೇರಳ ಕೂಡಾ ಅಭಿವೃದ್ಧಿಗೊಳ್ಳಬೇಕಾಗಿದೆ. ಇದಕ್ಕಾಗಿ ರಾಜಕೀಯ ಆಡಳಿತ ಬದಲಾವಣೆ ಅನಿವಾರ್ಯವಾಗಿದೆ ಎಂದು ಈ ಉದ್ದೇಶದಿಂದ ಹಗಲಿರುಳು ದುಡಿದ ಎಲ್ಲಾ ಕಾರ್ಯಕರ್ತರಿಗೆ …

ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರ ವಾರ್ಷಿಕ ಜಾತ್ರೆ ಇಂದಿನಿಂದ

ಮಧೂರು: ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಇಂದಿನಿಂದ 18ರವರೆಗೆ ವಾರ್ಷಿಕ ಜಾತ್ರೆ ನಡೆಯಲಿದೆ. ಈ ಸಂದರ್ಭ ದಲ್ಲಿ ಮಧ್ಯಾಹ್ನ 12 ಗಂಟೆಗೆ ತುಲಾಭಾರ ಸೇವೆಗಳು, 12.30ಕ್ಕೆ ಮಹಾಪೂಜೆ, ಸಂಜೆ ೫ಕ್ಕೆ ತಾಯಂ ಬಕ, ದೀಪಾರಾಧನೆ, ರಾತ್ರಿ 9ಕ್ಕೆ ಉತ್ಸವ ಬಲಿ ನಡೆಯಲಿದೆ. ಇಂದು ಬೆಳಿಗ್ಗೆ 6.30ಕ್ಕೆ ವೇದಪಾ ರಾಯಣ, 9ಕ್ಕೆ ಧ್ವಜಾರೋಹಣ, 10ಕ್ಕೆ ಸಹಸ್ರಕುಂಭಾಭಿಷೇಕ ಜರಗಿತು. ನಾಳೆ ಬೆಳಿಗ್ಗೆ 5 ಗಂಟೆಗೆ  ದೀಪೋ ತ್ಸವ, ವಿಷುಕಣಿಯ ವಿಶೇಷ ಬಲಿ, ರಾಜಾಂಗಣ ಪ್ರಸಾದ, 7.30ಕ್ಕೆ ಪಂಚ ವಾದ್ಯ,  16ರಂದು …