ಕುಂಬ್ಡಾಜೆಯಲ್ಲಿ ಮಳೆಗಾಲಪೂರ್ವ ಸ್ವಚ್ಛತೆಗೆ ಚಾಲನೆ
ಬದಿಯಡ್ಕ: ಆರೋಗ್ಯ ಜಾಗೃತಿಯಂಗವಾಗಿ ಕುಂಬ್ಡಾಜೆ ಪಂಚಾಯತ್, ಕುಟುಂಬ ಆರೋಗ್ಯ ಕೇಂದ್ರದ ಜಂಟಿ ಆಶ್ರಯದಲ್ಲಿ ನಿನ್ನೆ ಮಾರ್ಪನಡ್ಕ ಪಾಂಚಜನ್ಯ ಸಭಾಂಗಣದಲ್ಲಿ ಆರೋಗ್ಯ ವಿಚಾರ ಸಂಕಿರಣ ಮತ್ತು ಪೇಟೆ ಶುಚೀಕರಣ ಕಾರ್ಯಕ್ರಮ ನಡೆಯಿತು.ಕುಂಬ್ಡಾಜೆ ಪಂ.ನ ೧೪ ವಾರ್ಡ್ ಗಳಲ್ಲಿ ೧೪ರವರೆಗೆ ವಾರ್ಡ್ ಮಟ್ಟ ದಲ್ಲಿ ಜನಪ್ರತಿನಿದಿsಗಳ ನೇತೃತ್ವದಲ್ಲಿ ಸ್ವಚ್ಛತಾ ಸಪ್ತಾಹವನ್ನು ಆಚರಿಸ ಲಾಗುವುದು. ಇದರಂಗವಾಗಿ ನಡೆದ ವಿಚಾರ ಸಂಕಿರಣ, ಸಭೆ ಮತ್ತು ಗುಂಪು ಚರ್ಚೆಯಲ್ಲಿ ೨೦೦ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.ಕುಂಬ್ಡಾಜೆ ಪಂ. ಆರೋಗ್ಯ ಮತ್ತು ಶಿಕ್ಷಣ ವ್ಯವಹಾರಗಳ ಸಮಿತಿ ಅಧ್ಯಕ್ಷೆ …