ವಾಸಿಯಾಗದ ಕಾಲುನೋವು: ಖಾಸಗಿ ಆಸ್ಪತ್ರೆ ನೌಕರೆ ಆತ್ಮಹತ್ಯೆ

ಕಾಸರಗೋಡು: ವಾಸಿಯಾ ಗದ ಕಾಲುನೋವು ಹಿನ್ನೆಲೆಯಲ್ಲಿ ಮನನೊಂದು ಖಾಸಗಿ ಆಸ್ಪತ್ರೆಯ ನೌಕರೆ ಮಲಗುವ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ. ಕೂಡ್ಲು ಮೀಪುಗುರಿ ಕಾಳ್ಯಂಗಾಡು ದೇವಿಕೃಪ ನಿವಾಸಿ ಸೂರ್ಯ ಎಂಬವರ ಪತ್ನಿ ಶ್ಯಾಮಲ (50) ಆತ್ಮಹತ್ಯೆಗೈದವರು. ನಿನ್ನೆ ಸಂಜೆ 4 ಗಂಟೆಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಲಗುವ ಕೊಠಡಿಯಲ್ಲಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಶ್ಯಾಮಲ ಪತ್ತೆಯಾಗಿದ್ದಾರೆ. ಈಕೆ ಕಾಲು ನೋವಿನಿಂದ ಬಳಲುತ್ತಿದ್ದುದಾಗಿ ಹೇಳಲಾಗುತ್ತಿದೆ. ಇದರಿಂದ ಮಾನಸಿಕವಾಗಿ ನೊಂದಿದ್ದು, ಇದಾಗಿರಬಹುದು ಆತ್ಮಹತ್ಯೆಗೆ ಕಾರಣವೆಂದು ಶಂಕಿಸುತ್ತಿರು …

ಶಸ್ತ್ರಚಿಕಿತ್ಸೆ ಬಳಿಕ ಬಾಲಕ ಸಾವನ್ನಪ್ಪಿದ ಪ್ರಕರಣ: ರಾಜ್ಯ ಆರೋಗ್ಯ ಇಲಾಖೆಯ ವಿಶೇಷ ಸಮಿತಿಯಿಂದ ತನಿಖೆ

ಕಾಸರಗೋಡು: ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ   ಉದರ   ಸಂಬಂಧ ಕಾಯಿಲೆಗೆ  ಶಸ್ತ್ರಚಿಕಿತ್ಸೆಗೊಳಗಾದ ಬೇಡಡ್ಕ ತಲೆಕುನ್ನಿನ ಮುಹಮ್ಮದ್ ಇಯಾಸ್ (9) ಬಳಿಕ ಸಾವನ್ನಪ್ಪಿದ ಪ್ರಕರಣದ ತನಿಖೆ ಬಗ್ಗೆ ರಾಜ್ಯ ಆರೋಗ್ಯ ಇಲಾಖೆಯ ವಿಶೇಷ ತಂಡ ತನಿಖೆ ನಡೆಸಲಿದೆ. ಬಾಲಕನ ಮೃತದೇಹವನ್ನು ನಿನ್ನೆ  ಪರಿಯಾರಂನ ವೈದ್ಯಕೀಯ ಕಾಲೇಜು  ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಯಿತು. ನಂತರ ಮೃತದೇಹದ ಆಂತರಿಕ ಅವಯವಗಳನ್ನು  ಉನ್ನತ ಮಟ್ಟದ ಪರೀಕ್ಷೆಗಾಗಿ ಕಲ್ಲಿಕೋಟೆ ವೈದ್ಯಕೀಯ ಕಾಲೇಜಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.  ಅದರ ವರದಿ ಕೈಸೇರಿದ ಬಳಿಕವಷ್ಟೇ ಬಾಲಕನ ಸಾವಿಗೆ ಕಾರಣ ಸ್ಪಷ್ಟಗೊಳ್ಳಲಿದೆ ಯೆಂದು …

ಯುವತಿ ಕ್ಷೇತ್ರ ಕೆರೆಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ: ತನಿಖೆ ಆರಂಭ

ಕುಂಬಳೆ: ಮುಜುಂಗಾವು  ಕ್ಷೇತ್ರದ ಕೆರೆಯಲ್ಲಿ  ಯುವತಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆಗೆ ಸಂಬಂಧಿಸಿ ತನಿಖೆ ತೀವ್ರಗೊಳಿಸಿರುವುದಾಗಿ ಕುಂಬಳೆ ಪೊಲೀಸರು ತಿಳಿಸಿದ್ದಾರೆ. ಸೀತಾಂಗೋಳಿ ಎಡನಾಡು ಬ್ಯಾಂಕ್ ಸಮೀಪದ ರಾಮಕೃಷ್ಣ ಎಂಬವರ ಪತ್ನಿ ಎಂ. ಸುನಿತ (48) ಮುಜುಂಗಾವು ಶ್ರೀ ಪಾರ್ಥಸಾರಥಿ ಕ್ಷೇತ್ರದ ಕೆರೆಯಲ್ಲಿ ನಿನ್ನೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸುನಿತ ಮೊನ್ನೆ ರಾತ್ರಿ ಆಹಾರ ಸೇವಿಸಿ ನಿದ್ರಿಸಿದ್ದರು. ನಿನ್ನೆ ಬೆಳಿಗ್ಗೆ ಪತಿ ಎದ್ದು ನೋಡಿದಾಗ ಸುನಿತ ಮನೆಯಲ್ಲಿ ರಲಿಲ್ಲ. ಪರಿಸರ ಪ್ರದೇಶಗಳಲ್ಲಿ ಹುಡುಕಾಡಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಅವರು ಕುಂಬಳೆ …

ತರವಾಡು ಕ್ಷೇತ್ರಕ್ಕೆ ತೆರಳುತ್ತಿದ್ದ ವ್ಯಕ್ತಿಗೆ ಹಲ್ಲೆಗೈದು: ಹಣ ದರೋಡೆಗೈದ ಆರೋಪಿಗಳಿಗಾಗಿ ಶೋಧ

ಸೀತಾಂಗೋಳಿ: ತರವಾಡು ಕ್ಷೇತ್ರಕ್ಕೆ ತೆರಳುತ್ತಿದ್ದ ವ್ಯಕ್ತಿಯನ್ನು ದಾರಿಮಧ್ಯೆ ತಡೆದು ನಿಲ್ಲಿಸಿ  ಹಲ್ಲೆಗೈದು  ೪೩,೫೦೦  ರೂಪಾಯಿ ಗಳಿದ್ದ ಬ್ಯಾಗ್‌ನ್ನು ದರೋಡೆಗೈದ ಸಂಬಂಧ ಆರೋಪಿಗಾಗಿ ಪೊಲೀಸರು ಶೋಧ ತೀವ್ರಗೊಳಿಸಿದ್ದಾರೆ.  ಕಟ್ಟತ್ತಡ್ಕ ಎಡನಾಡಿನ ಈಶ್ವರ (೬೨) ಎಂಬವರ ಕೈಯಿಂದ ಹಣವಿದ್ದ ಬ್ಯಾಗ್‌ನ್ನು ದರೋಡೆಗೈಯ್ಯಲಾಗಿದೆ.  ಪೆರ್ಮುದೆ ಮುನ್ನೂರು ಹೊಸಮನೆ ತರವಾಡು ಕ್ಷೇತ್ರದ ಪದಾಧಿಕಾರಿಯಾದ ಈಶ್ವರ ತರವಾಡಿನಲ್ಲಿ ಸಂಕ್ರಮಣ ಕಾರ್ಯಕ್ರಮಕ್ಕೆಂದು  ತೆರಳುತ್ತಿದ್ದ ವೇಳೆ ನಿನ್ನೆ ಮಧ್ಯಾಹ್ನ ೨ ಗಂಟೆ ವೇಳೆ ಅವರಿಗೆ ಹಲ್ಲೆಗೈದು ಹಣ ದರೋಡೆ ನಡೆಸಲಾಗಿದೆ. ಮುನ್ನೂರಿನಲ್ಲಿ ಬಸ್ ಇಳಿದು ನಡೆದು ಹೋಗುತ್ತಿದ್ದಾಗ …

ಕರ್ನಾಟಕ ಮದ್ಯ ಸಹಿತ ಓರ್ವ ಸೆರೆ

ಉಪ್ಪಳ: ಬೈಕ್‌ನಲ್ಲಿ ಸಾಗಿಸುತ್ತಿದ್ದ ಕರ್ನಾಟಕ ಮದ್ಯ ಸಹಿತ ಓರ್ವನನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ.  ಪೈವಳಿಕೆ ಗ್ರಾಮದ ಬಾಯಿಕಟ್ಟೆ  ಜೆ.ಪಿ ನಿಲಯದ  ಜಯರಾಮ ಬಿ (53) ಬಂಧಿತ ವ್ಯಕ್ತಿ. ಈತನ ಕೈಯಿಂದ ೩.೪೨ ಲೀಟರ್ ಕರ್ನಾಟಕ ಮದ್ಯ ವಶಪಡಿಸಲಾಗಿದೆ.  ಈ ತಿಂಗಳ ೧೪ರಂದು  ರಾತ್ರಿ 7.30ಕ್ಕೆ ಬಾಯಿಕಟ್ಟೆಯಲ್ಲಿ ಕುಂಬಳೆ ಅಬಕಾರಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆ ವೇಳೆ  ಜಯರಾಮ ಬೈಕ್‌ನಲ್ಲಿ ಮದ್ಯವನ್ನು ಮಾರಾಟಕ್ಕಾಗಿ ಕೊಂಡೊಯ್ಯುತ್ತಿದ್ದನೆನ್ನಲಾಗಿದೆ. ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಎ.ಬಿ. ಅಬ್ದುಲ್ಲ, ಸಿವಿಲ್ …

ಉಪ್ಪಿನಂಗಡಿಯ ಕಳ್ಳನೋಟು ಕೇಂದ್ರಕ್ಕೆ ಪೊಲೀಸ್ ದಾಳಿ: ಕಾಸರಗೋಡು ನಿವಾಸಿಗಳ ಸಹಿತ 7 ಮಂದಿ ಸೆರೆ

ಕಾಸರಗೋಡು: ಕರ್ನಾಟಕದ ಉಪ್ಪಿನಂಗಡಿಯ ಕಳ್ಳನೋಟು ನಿರ್ಮಾಣ ಕೇಂದ್ರಕ್ಕೆ  ಪೊಲೀಸರು ದಾಳಿ ನಡೆಸಿ ಕಾಸರಗೋಡು ನಿವಾಸಿಗಳ ಸಹಿತ ಏಳು ಮಂದಿಯನ್ನು ಬಂಧಿಸಿದ್ದಾರೆ. ಚೆಂಗಳ ಪಾಡಿ ಸಮೀಪದ ಕ್ವಾರ್ಟರ್ಸ್‌ವೊಂ ದರಲ್ಲಿ ವಾಸಿಸುವ ಶೆರೀಫ್ (51),  ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಕೋರ್ಕಟ್ಟದ ಮುಹಮ್ಮದ್ ನಬಾಸ್ (37), ಪುತ್ತೂರು ಬಪ್ಪಳಿಗೆಯ ಇಬ್ರಾಹಿಂ (60), ಉತ್ತರಕನ್ನಡ ಮರಕ್ಕನಾಡಿಯ ಸಂದೀಪ್ ಪುಂಡಲೀಕ (30), ಪುತ್ತೂರು ಕುಂಬ್ರದ ಸಲ್ಮಾನ್ ಫಾರೀಸ್ (25), ಬೆಳ್ತಂಗಡಿ ಉರ್ವಾಳೂರಿನ ಸಿರಾಜ್ ಯಾನೆ ಸಿರಾಜುದ್ದೀನ್ (34), ಪುತ್ತಿಲದ ಇರ್ಷಾದ್ (31) ಎಂಬಿವರು …

 15 ಸಾವಿರ ರೂ. ಲಂಚ ಪಡೆದ ಮಿನರಲ್ ರೆವನ್ಯೂ ಇನ್‌ಸ್ಪೆಕ್ಟರ್ ಸೆರೆ

ಕಣ್ಣೂರು: ರಾಜ್ಯವನ್ನು ಭ್ರಷ್ಟಾಚಾರ ಮುಕ್ತಗೊಳಿಸಲಿರುವ ವಿಜಿಲೆನ್ಸ್‌ನ ಪ್ರೊಜೆಕ್ಟ್ ಝೀರೋ ಯೋಜನೆಯಂಗವಾಗಿ ನಡೆಸಿದ ಕಾರ್ಯಾಚರಣೆಯಲ್ಲಿ 15 ಸಾವಿರ  ರೂಪಾಯಿ ಲಂಚ ಪಡೆದ ಮಿನರಲ್ ರೆವೆನ್ಯೂ ಇನ್‌ಸ್ಪೆಕ್ಟರ್‌ನನ್ನು ಬಂಧಿಸಲಾಗಿದೆ.  ಕಣ್ಣೂರು ಚೆರುಕುನ್ನು ನಿವಾಸಿಯೂ ಜಿಲ್ಲಾ ಮೈನಿಂಗ್ ಆಂಡ್ ಜಿಯೋಲಜಿ ಕಚೇರಿಯ ಮಿನರಲ್ ರೆವೆನ್ಯೂ ಆಫೀಸರ್ ಪಿ.ಪಿ.ಶ್ರೀಧರನ್ (49) ನನ್ನು ಕಣ್ಣೂರು ವಿಜಿಲೆನ್ಸ್ ಡಿವೈಎಸ್ಪಿ ಬಾಬು ಪೆರಿಂಙೋತ್ತ್‌ರ ನೇತೃತ್ವದಲ್ಲಿ ಸೆರೆಹಿಡಿಯಲಾಗಿದೆ. ಕಣ್ಣೂರು ಚೆರುಕುನ್ನು ನಿವಾಸಿಯಾದ ದೂರುಗಾರ  ಹೊಯ್ಗೆಮಣ್ಣು ಸಂಗ್ರಹಿಸಿ ಮಾರಾಟ ನಡೆಸಲಿರುವ ಅನುಮತಿಗಾಗಿ ೨೦೨೫ ಜೂನ್ ತಿಂಗಳಲ್ಲಿ ಜಿಯೋಲಜಿ ಕಚೇರಿಯಲ್ಲಿ ಅರ್ಜಿ …

ರಬ್ಬರ್ ಶೀಟ್ ಯಂತ್ರ ಕಳವು: ಓರ್ವ ಸೆರೆ

ಬದಿಯಡ್ಕ: ಶೇಣಿ ಏಳ್ಕಾನದಿಂದ ರಬ್ಬರ್ ಶೀಟ್ ಯಂತ್ರ ಕಳವುಗೈದ ಪ್ರಕರಣದಲ್ಲಿ ಓರ್ವ ಸೆರೆಗೀಡಾಗಿದ್ದಾನೆ. ಪುತ್ತಿಗೆ ಬಾಡೂರುಪಳ್ಳ ಕೋಟ ನಿವಾಸಿ ಮುಹಮ್ಮದ್ ಇಶಾಕ್ (19) ಎಂಬಾತನನ್ನು ಬದಿಯಡ್ಕ ಇನ್‌ಸ್ಪೆಕ್ಟರ್ ಆರ್.ಪಿ. ಅನೂಪ್ ಕೃಷ್ಣನ್ ನೇತೃತ್ವದಲ್ಲಿ ಬಂಧಿಸಲಾ ಗಿದೆ. ಪ್ರಾಯಪೂರ್ತಿ ಯಾಗದ ಇಬ್ಬರ ಸಹಾಯದೊಂದಿಗೆ ಈತ 600 ಕಿಲೋ ತೂಕದ ರಬ್ಬರ್ ರೋಲರ್ ಯಂತ್ರವನ್ನು ಕಳವುಗೈದಿ ರುವುದಾಗಿ ದೂರಲಾಗಿದೆ. ಕನ್ನಾಟಿಕಾ ನದ ಸೋಜನ್ ಜೋರ್ಜ್ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಜೂನ್ 22ರಿಂದ   28ರ ಮಧ್ಯೆಗಿನ ದಿನಗಳಲ್ಲಿ  …

ಕಾಸರಗೋಡು ಸರಕಾರಿ ಕಾಲೇಜಿನಲ್ಲಿ : ರ‍್ಯಾಗಿಂಗ್: 13 ವಿದ್ಯಾರ್ಥಿಗಳ ಅಮಾನತು

ಕಾಸರಗೋಡು: ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಪ್ರಥಮ ವರ್ಷ  ಪದವಿ ವಿದ್ಯಾರ್ಥಿಯನ್ನು   ರ‍್ಯಾಗಿಂಗ್ ಗೊಳಪಡಿಸಿದ ಆರೋಪದಂತೆ  ದ್ವಿತೀಯ ಮತ್ತು ತೃತೀಯ ವರ್ಷದ ಪದವಿ ವಿದ್ಯಾರ್ಥಿಗಳಾದ 13 ಮಂದಿಯನ್ನು ತನಿಖಾ ವಿಧೇಯ ಗೊಳಿಸಿ ಪ್ರಾಂಶುಪಾಲ ವಿ.ಎಸ್. ಅನಿಲ್ ಕುಮಾರ್ ಅಮಾನತುಮಾ ಡಿದ್ದಾರೆ.  ಜುಲೈ 13ರಂದು ಕಾಲೇಜು ಕ್ಯಾಂಪಸ್‌ನಲ್ಲಿ ತಂಡವೊಂದು ಪ್ರಥಮವರ್ಷ ಪದವಿ ವಿದ್ಯಾರ್ಥಿಯನ್ನು  ತಡೆದು ನಿಲ್ಲಿಸಿ ಬೆದರಿಕೆಯೊಡ್ಡಿ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಘಟನೆ ಬಗ್ಗೆ ವಿದ್ಯಾರ್ಥಿ ರಕ್ಷಕರಲ್ಲಿ ತಿಳಿಸಿದ್ದು, ಅನಂತರ ಕಾಲೇಜಿನ ಪ್ರಾಂಶುಪಾ ಲರಿಗೆ ದೂರು ನೀಡಲಾಗಿತ್ತು. ಕಾಲೇಜು ಅಧಿಕಾರಿಗಳು …

ವಾಟ್ಸಪ್ ಮೂಲಕ ಯುವತಿಗೆ ಕಿರುಕುಳ : ಕುಂಜತ್ತೂರು ನಿವಾಸಿ ವಿರುದ್ಧ ಕೇಸು

ಮಂಜೇಶ್ವರ: ವಾಟ್ಸಾಪ್ ಮೂಲಕ ವಿವಾಹಿತ ಯುವತಿಗೆ ಕಿರುಕುಳ ನೀಡಿ  ಆಕೆಯನ್ನು  ಅವಮಾನಗೈಯ್ಯಲೆತ್ನಿಸಿರುವುದಾಗಿ ನೀಡಿದ ದೂರಿನಂತೆ  ಯುವಕ ನೋರ್ವನ ವಿರುದ್ಧ ಕಾಸರಗೋಡು ಸೈಬರ್ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ವರ್ಕಾಡಿ ಪಾವೂರು ನಿವಾಸಿಯಾದ 31ರ ಹರೆಯದ ಯುವತಿ ದೂರು ನೀಡಿದ್ದಾಳೆ.  ಕುಂಜತ್ತೂರು ನಿವಾಸಿ ಇಬ್ರಾಹಿಂ ಖಲೀಲ್  ಎಂಬಾತ     ಮೇ 29ರಿಂದ ಜೂನ್ 30ರ ವರೆಗಿನ ಕಾಲಾವಧಿಯಲ್ಲಿ ಅವಮಾನಗೈಯ್ಯುವ ರೀತಿಯಲ್ಲಿ ವಾಟ್ಸಪ್‌ನಲ್ಲಿ ಪ್ರಚಾರಗೈದಿರುವುದಾಗಿ   ಯುವತಿ ಆರೋಪಿಸಿದ್ದಾಳೆ. ಸೈಬರ್ ಸೆಲ್ ಎಸ್‌ಐ ಎಂ. ಸವ್ಯಸಾಚಿ ಯುವತಿಯ ಹೇಳಿಕೆ ದಾಖಲಿಸಿ ಕೊಂಡ ಬಳಿಕ ಯುವಕನ …