ಪತ್ನಿಯ ಸಹೋದರನನ್ನು ಇರಿದು ಕೊಲೆಗೈದ ಪ್ರಕರಣದ ಆರೋಪಿ ಹಲವು ವರ್ಷಗಳ ಬಳಿಕ ಬಂಧನ
ಕಾಸರಗೋಡು: 2010ರಲ್ಲಿ ಪರಶ್ಶಿನಿಕಡವು ಮಾಂಕಡವು ಎಂಬಲ್ಲಿ ಜಲೀಲ್ ಎಂಬವರನ್ನು ಇರಿದು ಕೊಲೆಗೈದ ಪ್ರಕರಣದಲ್ಲಿ ತಲೆಮರೆಸಿಕೊಂಡ ಆರೋಪಿ ಸೆರೆಗೀಡಾಗಿದ್ದಾನೆ. ವಾಳಯಿಲ್ ಮುಹಮ್ಮದ್ ಅಲಿ (55) ಎಂಬಾತನನ್ನು ಕಣ್ಣೂರು ಸಿಟಿ ಪೊಲೀಸರ ಪ್ರತ್ಯೇಕ ತನಿಖಾ ತಂಡ ಉಪ್ಪಳದಿಂದ ಸೆರೆಹಿಡಿದಿದೆ. 2010 ಸೆಪ್ಟಂಬರ್ 17ರಂದು ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿತ್ತು. ಪರಶ್ಶಿನಿಕಡವು ಮಾಂಕಡವಿನಲ್ಲಿ ಮೊಯ್ದು ಎಂಬವರ ಮಕ್ಕಳಾದ ಜಲಾಲ್ ಹಾಗೂ ಶಂಸೀರ್ ಎಂಬಿವರನ್ನು ಸಹೋದರಿಯ ಪತಿಯಾದ ಮುಹಮ್ಮದ್ ಅಲಿ ಆಸ್ತಿ ತರ್ಕದ ವಿವಾದದ ಹಿನ್ನೆಲೆಯಲ್ಲಿ ಕೊಲೆಗೈಯ್ಯಬೇಕೆಂಬ ಉದ್ದೇಶದೊಂದಿಗೆ ಇರಿದು ಗಾಯಗೊಳಿಸಿದ್ದನು. ಇರಿತದಿಂದ …
Read more “ಪತ್ನಿಯ ಸಹೋದರನನ್ನು ಇರಿದು ಕೊಲೆಗೈದ ಪ್ರಕರಣದ ಆರೋಪಿ ಹಲವು ವರ್ಷಗಳ ಬಳಿಕ ಬಂಧನ”