ಕುಂಬಳೆ ದೇವಿನಗದಲ್ಲಿ ಹಾನಿಗೊಂಡ ಸರ್ವೀಸ್ ರಸ್ತೆ: ಅಪಘಾತ ನಿತ್ಯ ಘಟನೆ

ಕುಂಬಳೆ: ಇಲ್ಲಿನ ದೇವಿನಗರ ದಲ್ಲಿ ಸರ್ವೀಸ್ ರಸ್ತೆಗಳು ನಾಶಗೊಂ ಡಿವೆ. ಇದರಿಂದಾಗಿ ರಸ್ತೆ ಅಪಘಾತ ಗಳು ಹೆಚ್ಚುತ್ತಿವೆ. ಅವೈಜ್ಞಾನಿಕ ನಿರ್ಮಾಣವೇ ಹಾನಿಗೊಳ್ಳಲು ಕಾರಣವೆಂದು ಸ್ಥಳೀಯರು ಆರೋ ಪಿಸುತ್ತಾರೆ. ಒಂದು ವಾರದ ಹಿಂದೆ ದೇವಿನಗರದಲ್ಲಿ ಸರ್ವೀಸ್ ರಸ್ತೆಯ ಚರಂಡಿಯ ಮೇಲೆ ಹಾಸಿದ್ದ ಸ್ಲ್ಯಾಬ್ ಹಾನಿಗೊಂಡಿತ್ತು. ಈ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ತೊಡಕಾಗಿತ್ತು. ಈ ಬಗ್ಗೆ ತಿಳಿದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಇಲ್ಲಿ ಪ್ಲಾಸ್ಟಿಕ್ ಬಾರಿಕೇಡ್ ಸ್ಥಾಪಿಸಿ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆಂದು ದೂರಲಾಗಿದೆ. ಇದೇ ವೇಳೆ ಹಾನಿಗೊಂಡ ರಸ್ತೆಯ ದುರಸ್ತಿ …

ಕುಂಬಳೆ ಪ್ರೆಸ್ ಫಾರಂ: ಸೋಶ್ಯಲ್ ಮೀಡಿಯಾ ಉದ್ಘಾಟನೆ ಇಂದು

 ಕುಂಬಳೆ: ಕುಂಬಳೆ ಪ್ರೆಸ್ ಫಾರಂ ಡಿಜಿಟಲೈಸೇಶನ್ ಅಂಗವಾಗಿ ಆರಂಭಿಸುವ ಯೂಟ್ಯೂಬ್, ಫೇಸ್ ಬುಕ್, ಇನ್‌ಸ್ಟಾಗ್ರಾಂ ಪೇಜ್‌ಗಳ ಉದ್ಘಾಟನೆ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಇಂದು ಸಂಜೆ ೪ಕ್ಕೆ ಕುಂಬಳೆ  ಪ್ರೆಸ್‌ಫಾರಂ ಹಾಲ್‌ನಲ್ಲಿ ನಡೆಯಲಿದೆ. ಶಾಸಕ ಎಕೆಎಂ ಅಶ್ರಫ್, ಕುಂಬಳೆ ಪಂ. ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್, ಮುಳುಗುತಜ್ಞ ಈಶ್ವರ ಮಲ್ಪೆ, ಕಾಸರಗೋಡು ಬ್ಲೋಕ್ ಪಂಚಾಯತ್  ಸ್ಥಾಯೀ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಳೆ, ಕುಂಬಳೆ ಸಿಐ ಅನೂಪ್‌ಕೃಷ್ಣ, ಉದ್ಯಮಿ ಡಾ. ಎಂ.ಎಂ. ಇಸ್ಸುದ್ದೀನ್ ಎಂಬಿವರನ್ನು ಗೌರವಿಸಲಾಗುವುದು.

ಗೋ ಸಮ್ಮಾನ್ ಆವಾಹನ್ ಅಭಿಯಾನಕ್ಕೆ ಕುಂಬ್ಡಾಜೆಯಲ್ಲಿ ಚಾಲನೆ

ಮಾರ್ಪನಡ್ಕ: ಭಾರತೀಯ ಸ್ಥಳೀಯ ಗೋ ತಳಿಗಳಿಗೆ ರಾಷ್ಟ್ರೀಯ ಗೌರವವನ್ನು ಒದಗಿಸುವಂತೆ ಆಗ್ರಹಿಸಿ, ದೇಶಾದ್ಯಂತ ೪೦ ಕೋಟಿ ಸಹಿಗಳನ್ನು ಸಂಗ್ರಹಿಸಿ ಭಾರತದ ರಾಷ್ಟ್ರಪತಿಗೆ ಮನವಿ ಸಲ್ಲಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ‘ಗೋ ಸಮ್ಮಾನ್ ಆವಾಹನ್ ಅಭಿಯಾನ’ಕ್ಕೆ ಕುಂಬ್ದಾಜೆ ಪಂಚಾಯತ್ ವ್ಯಾಪ್ತಿಯಲ್ಲಿ ಚಾಲನೆ ನೀಡಲಾಯಿತು.ಅಕ್ಟೋಬರ್ ೨೭ರಂದು ರಾಷ್ಟ್ರಪತಿಗೆ ಸಲ್ಲಿಸಲಿರುವ ಈ ಮನವಿಗೆ ನಿವೃತ್ತ ಜಿಲ್ಲಾ ಮೆಡಿಕಲ್ ಮಾಸ್ ಆಫೀಸರ್, ಕುಂಬ್ದಾಜೆ ಹಿಂದೂ ಸಮಾಜೋತ್ಸವದ ಗೌರವಾಧ್ಯಕ್ಷ ರಾಮಚಂದ್ರ ಪದ್ಮಾರ್ ಮಾರ್ಪನಡ್ಕ ಪ್ರಥಮ ಸಹಿ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.ಭಾರತೀಯ ಸಂಸ್ಕೃತಿ, ಕೃಷಿ …

ಅಸೌಖ್ಯ: ನಿವೃತ್ತ ಮುಖ್ಯೋಪಾಧ್ಯಾಯಿನಿ ನಿಧನ

ಕಾಸರಗೋಡು: ತಳಂಗರೆ ಪಳ್ಳಿಕ್ಕಲ್ ಎಂ.ಐ.ಎ.ಎಲ್.ಪಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ವಿದ್ಯಾನಗರ ನಿವಾಸಿ ಕೆ.ವಿ. ಆನಂದವಲ್ಲಿ (54) ನಿಧನ ಹೊಂದಿದರು. ಅಸೌಖ್ಯ ಹಿನ್ನೆಲೆಯಲ್ಲಿ ಒಂದು ವರ್ಷದ ಹಿಂದೆ ಶಾಲೆಯಿಂದ ಸ್ವತಃ ರಜೆ ಪಡೆದು ನಿವೃತ್ತರಾಗಿದ್ದರು. ೩೦ ವರ್ಷಕ್ಕೂ ಹೆಚ್ಚು ಕಾಲ ಈ ಶಾಲೆಯಲ್ಲಿ ಸೇವೆಗೈದಿದ್ದರು. ಮೃತರು ಪತಿ ದಾಮೋದರನ್ (ನಿವೃತ್ತ ಡಿಡಿಇ ಸುಪರಿಂಟೆಂಡೆಂಟ್), ಪುತ್ರ ಅಮರನಾಥ್ (ಅಸಿಸ್ಟೆಂಟ್ ಇಂಜಿನಿಯರ್, ಪುತ್ತಿಗೆ ಪಂಚಾಯತ್), ಸಹೋದರ- ಸಹೋದರಿಯರಾದ ಅನಿಲ್ ಕುಮಾರ್, ಶ್ಯಾಮಳವಲ್ಲಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಚೆರ್ಕಳ- ಕಲ್ಲಡ್ಕ ಅಂತಾರಾಜ್ಯ ರಸ್ತೆಯ ಪಳ್ಳತ್ತಡ್ಕ ಸೇತುವೆಯಲ್ಲಿ ಬೃಹತ್ ಹೊಂಡ ಸೃಷ್ಟಿ: ಸಂಚಾರ ಭೀತಿ

ಬದಿಯಡ್ಕ: ಚೆರ್ಕಳ- ಕಲ್ಲಡ್ಕ ಅಂತಾರಾಜ್ಯ ರಸ್ತೆಯ ಪೆರ್ಲ ಬದಿಯಡ್ಕ ಪೇಟೆಯನ್ನು ಸಂಪರ್ಕಿಸುವ ಪಳ್ಳತ್ತಡ್ಕ ಸೇತುವೆಯಲ್ಲಿ ಬೃಹತ್ ಹೊಂಡ ಸೃಷ್ಟಿಯಾಗಿದೆ. ಸುಮಾರು 15 ಸೆಂಟಿ ಮೀಟರ್‌ನಷ್ಟು ಆಳದ ಒಂದೂವರೆ ಮೀಟರ್ ಸುತ್ತಳತೆಯ ಹೊಂಡ ಇಲ್ಲಿ ನಿರ್ಮಾಣಗೊಂಡಿದ್ದು, ಇದು ಸೇತುವೆಯಲ್ಲಿ ಅಪಘಾತ ಸೃಷ್ಟಿಗೆ ಕಾರಣವಾಗುತ್ತಿದೆ. ಸೇತುವೆಯ ಎಡಭಾಗದಲ್ಲಿ ಈ ಹೊಂಡ ಪ್ರತ್ಯಕ್ಷವಾಗಿದ್ದು, ಈ ಸೇತುವೆಯ ಮೂಲಕ ಪ್ರತಿನಿತ್ಯ ೩೦ಕ್ಕೂ ಹೆಚ್ಚು ಬಸ್‌ಗಳು ಹಾಗೂ ಇದರ ೧೦ ಪಾಲಿಗೂ ಹೆಚ್ಚು ಇತರ ವಾಹನಗಳು ಸಂಚರಿಸುತ್ತಿವೆ. ಟೋರಸ್ ವಾಹನಗಳಲ್ಲಿ ಇತ್ತೀಚೆಗಿನಿಂದ ಅನಿಯಂತ್ರಿತವಾಗಿ ಕಗ್ಗಲ್ಲು …