ನಾಡಿನಾದ್ಯಂತ ಗಣೇಶ ಚತುರ್ಥಿ ಆಚರಣೆ

ಕಾಸರಗೋಡು: ನಾಡಿನಾದ್ಯಂತ ಇಂದು ಗಣೇಶ ಚತುರ್ಥಿ ಹಬ್ಬವನ್ನು  ಭಕ್ತಿ ಸಡಗರದೊಂದಿಗೆ ಸಂಭ್ರಮ ದಿಂದ ಆಚರಿಸಲಾಗುತ್ತಿದೆ. ವಿವಿಧ ದೇವಾಲಯ,  ತರವಾಡು ಕ್ಷೇತ್ರಗ ಳಲ್ಲಿ ಗಣೇಶೋತ್ಸವ ಆಚರಿಸಲಾ ಗುತ್ತಿದೆ. ಕಾಸರಗೋಡು ಜಿಲ್ಲೆಯಲ್ಲಿ ಪ್ರಧಾನವಾಗಿ  ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರ, ಕಾಸರಗೋಡು ಶ್ರೀ ಮಲ್ಲಿಕಾರ್ಜುನ ಕ್ಷೇತ್ರ, ಮುಳ್ಳೇರಿಯ ಗಣೇಶ ಕಲಾ ಮಂದಿರ,  ಸೀತಾಂಗೋಳಿ ಶ್ರೀದೇವಿ ಭಜನಾ ಮಂದಿರ, ಬಾಡೂರು ಶ್ರೀಕೃಷ್ಣ ಭಜನಾ ಮಂದಿರ, ಬದಿಯಡ್ಕ ಗಣೇಶ ಮಂದಿರ, ಬೆಳ್ಳೂರು ನಾಟೆಕಲ್ಲು ಶ್ರೀ ಅಯ್ಯಪ್ಪ ಭಜನಾ ಮಂದಿರ, ಪೆರ್ಲ ಶ್ರೀ ಸತ್ಯನಾರಾಯಣ …

ಬಸ್‌ನಿಂದ ಇಳಿಯುತ್ತಿದ್ದ ವೃದ್ಧೆಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಲೆತ್ನ: ತಮಿಳುನಾಡು ನಿವಾಸಿ ಮಹಿಳೆ ಸೆರೆ

ಕಾಸರಗೋಡು: ಬಸ್ಸಿನಿಂದ ಇಳಿಯುತ್ತಿದ್ದ ವೃದ್ಧೆಯ ಕುತ್ತಿಗೆಯಿಂದ ೩ ಪವನ್ ಚಿನ್ನದ ಸರವನ್ನು ಕಳವುಗೈಯ್ಯಲು ಪ್ರಯತ್ನಿಸಿದ ತಮಿಳು ನಾಡು ನಿವಾಸಿ ಮಹಿಳೆ ಸೆರೆಗೀಡಾಗಿ ದ್ದಾಳೆ. ಮಧುರೈ ನಿವಾಸಿ ಮುತ್ತಾತ (40) ಎಂಬಾಕೆಯನ್ನು  ಕಳವು ಯತ್ನ ವೇಳೆ ನಾಗರಿಕರು ಸೆರೆಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ನಿನ್ನೆ ಮಧ್ಯಾಹ್ನ 2 ಗಂಟೆಗೆ  ಘಟನೆ ನಡೆದಿದೆ. ಬಂಗ್ರಮಂಜೇಶ್ವರ ನಿವಾಸಿ ಪ್ರೇಮ 77) ಎಂಬವರ  ಕುತ್ತಿಗೆಯಿಂದ ೩ ಪವನ್‌ನ ಚಿನ್ನದ ಸರವನ್ನು  ಮುತ್ತಾತ ಕಸಿಯಲು ಪ್ರಯತ್ನಿಸಿದ್ದಳು.  ಸಂಬಂಧಿಕರ ಮದುವೆ  ಅತಿಥಿ ಸತ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಂಗಳೂರಿನಿಂದ …

ಯುವತಿಗೆ ದೈಹಿಕ ಕಿರುಕುಳ: ಪತಿ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲು

ಮಂಜೇಶ್ವರ:  ಯುವತಿಗೆ ದೈಹಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ಆಕೆ ನೀಡಿದ ದೂರಿನಂತೆ ಪತಿ ಸೇರಿದಂತೆ ನಾಲ್ವರ ವಿರುದ್ಧ ಮಂಜೇಶ್ವರ ಪೊಲೀಸರು ಪ್ರಕಣ ದಾಖಲಿಸಿಕೊಂಡಿದ್ದಾರೆ. ಕುಂಜತ್ತೂರು ಉದ್ಯಾವರ ಮಿಸ್ರಿಯಾ ಮಂಜಿಲ್‌ನ   ಮುಹಮ್ಮದ್ ಎಂಬವರ ಪುತ್ರಿ   ಅಮಿನತ್ತ್ ಇಶ್ವಾನ (24) ಎಂಬಾಕೆ ಈ ಬಗ್ಗೆ ದೂರು ನೀಡಿದ್ದು ಅದರಂತೆ ಆಕೆಯ ಪತಿ ಕುಂಜತ್ತೂರು ಪದವಿನ ಅಬ್ಬಾಸ್ ಅನಸ್, ಆಮಿನ, ಮುಹಮ್ಮದ್ ಮತ್ತು ಅಜೀಮ್ ಎಂಬವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. 2025 ಜನವರಿ 19ರಂದು ಅಬ್ಬಾಸ್ ಅನಸ್‌ನೊಂದಿಗೆ …

ಮನೆಯಲ್ಲಿ 6.520 ಕಿ.ಗ್ರಾಂ ಗಾಂಜಾ ಪತ್ತೆ: ಓರ್ವ ಸೆರೆ

ಕಾಸರಗೋಡು: ಅಬಕಾರಿ ತಂಡ ನಿನ್ನೆ ನಡೆಸಿದ ಗುಪ್ತ ಕಾರ್ಯಾಚರಣೆಯಲ್ಲಿ ಮನೆಯಲ್ಲಿ ಬಚ್ಚಿಡಲಾಗಿದ್ದ 6.520 ಗ್ರಾಂ ಗಾಂಜಾ ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದೆ. ಹೊಸದುರ್ಗ ತಾಲೂಕಿನ ಉದಿನೂರು ಗ್ರಾಮದ ಮಾಚಿಕ್ಕಾಡ್ ಕೊಕ್ಕಾಕಡವ್ ನಿವಾಸಿ ಸಿ. ಧನಂ ಎಂಬ ಮಹಿಳೆ ಮತ್ತು ಅವರ ಕುಟುಂಬ ವಾಸಿಸುತ್ತಿರುವ ಮನೆಯಿಂದ ಈ ಮಾಲು ಪತ್ತೆಹಚ್ಚಲಾಗಿದೆ.  ಇದಕ್ಕೆ ಸಂಬಂಧಿಸಿ ಉದಿನೂರು ಮಾಚಿಕ್ಕಾಡ್ ಕೊಕ್ಕಾಕಡವಿನ ತುರುತ್ತಿ ಮಠತ್ತಿಲ್ ವೀಟಿಲ್‌ನ ಟಿ.ಆರ್. ಮಣಿ (57) ಎಂಬಾತನನ್ನು ಅಬಕಾರಿ ತಂಡ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದೆ. ಕಾಸರಗೋಡು ಇ.ಐ. ಆಂಡ್ ಐಬಿಗೆ …

ಮನೆ ಕೆಡಹುತ್ತಿದ್ದ ವೇಳೆ ಸ್ಲ್ಯಾಬ್ ಮೈಮೇಲೆ ಬಿದ್ದು ಯುವಕ ಮೃತ್ಯು

ಕಾಸರಗೋಡು: ಹಳೆ ಮನೆಯನ್ನು ಕೆಡಹುತ್ತಿದ್ದ ವೇಳೆ ಸ್ಲ್ಯಾಬ್ ಮೈಮೇಲೆ ಕುಸಿದು ಬಿದ್ದು ಯುವಕ ಸಾವನ್ನಪ್ಪಿದ ದಾರುಣ ಘಟನೆ ಕೂಡ್ಲು ಬಳಿ ನಡೆದಿದೆ. ಮೂಲತಃ ಪಾಲಕ್ಕಾಡ್ ಕೊಲ್ಲಂಕೋಡ್ ಪಯಲೂರ್ ಮುಖ್ ತೆಕತ್ತರ ನಿವಾಸಿ ಹಾಗೂ ಈಗ ಪೆರಿಯದ ಕುಣಿಯಾದಲ್ಲಿ ವಾಸಿಸುತ್ತಿರುವ ವಿ.ವಿ. ವಿಶಾಖ್ ಚಂದ್ರ (35) ಸಾವನ್ನಪ್ಪಿದ ದುರ್ದೈವಿ. ಕೂಡ್ಲು ಭಗವತಿನಗರದಲ್ಲಿರುವ ಸಂಬಂಧಿಕರೊಬ್ಬರ ಹಳೆ ಮನೆಯನ್ನು ವಿಶಾಖ್ ಸೇರಿ ಇತರ ಕಾರ್ಮಿಕರು ನಿನ್ನೆ ಮಧ್ಯಾಹ್ನ ಕೆಡಹುತ್ತಿದ್ದ ವೇಳೆ ಸ್ಲ್ಯಾಬ್ ಕುಸಿದು ವಿಶಾಖ್‌ರ ದೇಹದ ಮೇಲೆ ಕುಸಿದು ಬಿದ್ದಿದೆ. ಇದರಿಂದ …

ರಿಕ್ಷಾ ಚಾಲಕ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಮಧೂರು: ಆಟೋರಿಕ್ಷಾ ಚಾಲಕ ಮನೆ ಪಕ್ಕದ ಮರಕ್ಕೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಧೂರು ಬೈನಡ್ಕದ ದಿ| ಕುಂಞಿರಾಮ ಮಣಿಯಾಣಿ -ಸುಶೀಲ ದಂಪತಿ ಪುತ್ರ ಚಂದ್ರಶೇಖರ ಮಣಿಯಾಣಿ (51) ಸಾವನ್ನಪ್ಪಿದ ವ್ಯಕ್ತಿ. ಇವರು ನಿನ್ನೆ ಮನೆ ಪಕ್ಕದ ಮರವೊಂದರ ರೆಂಬೆಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರು ಸ್ಥಳಕ್ಕೆ  ತಲುಪಿ ಮೃತದೇಹವನ್ನು ಜನರಲ್ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೊಳಪ ಡಿಸಲಾಯಿತು. ಮಧೂರು ದೇವಸ್ಥಾನ ಪರಿಸರದ ಆಟೋರಿಕ್ಷಾ ಸ್ಟಾಂಡ್‌ನಲ್ಲಿ ಚಂದ್ರ ಶೇಖರ ಮಣಿಯಾಣಿ ಆಟೋರಿಕ್ಷಾ ಚಾಲಕನಾಗಿ …

ಕರ್ನಾಟಕ ಮದ್ಯ ಸಹಿತ ಸೆರೆ

ಕುಂಬಳೆ:  ಕರ್ನಾಟಕ ಮದ್ಯ ಸಹಿತ ಯುವಕ ಸೆರೆಗೀಡಾಗಿದ್ದಾನೆ. ಮಂಗಲ್ಪಾಡಿ ಪ್ರತಾಪನಗರ ನಿವಾಸಿ ಪಿ. ಅಭಿಷೇಕ್ (31) ಸೆರೆಗೀಡಾದ ಯುವಕ. ಮೊನ್ನೆ ಸಂಜೆ ಕುಬಣೂರು ಎಟಿಎಸ್ ಗ್ರೌಂಡ್ ಸಮೀಪ ನಿಂತಿದ್ದ ಅಭಿಷೇಕ್ ನನ್ನು ಕುಂಬಳೆ ಪೊಲೀಸರು ತಪಾಸಣೆ ನಡೆಸಿದಾಗ ಆತನ ಕೈಯಲ್ಲಿ ೧೮೦ ಮಿಲ್ಲಿ ಲೀಟರ್‌ನ 24 ಟೆಟ್ರಾ ಪ್ಯಾಕೆಟ್ ಕರ್ನಾಟಕ ಮದ್ಯ ಪತ್ತೆಯಾಗಿದೆ. ಈತ ಕರ್ನಾಟಕದಿಂದ ಮದ್ಯ ತಂದು ಮಾರಾಟ ನಡೆಸುವ ತಂಡದ ಸದಸ್ಯನಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್‌ಗಳಾದ …

ಅಸೌಖ್ಯ: ಯುವತಿ ನಿಧನ

ಉಪ್ಪಳ : ಕುಂಬಳೆ ಕಂಚಿಕಟ್ಟೆ ನಿವಾಸಿ ಪ್ರದೀಪ್‌ರ ಪತ್ನಿ ವೈಶಾಲಿ (33) ನಿನ್ನೆ ಮುಂಜಾನೆ ನಿಧನ ಹೊಂದಿದರು. ಅಸೌಖ್ಯ ತಗಲಿ ಬಂದ್ಯೋಡು ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆಯಲ್ಲಿದ್ದರು. ನಿನ್ನೆ ನಿಧನ ಸಂಭವಿಸಿದೆ. ಮೃತರು ತಂದೆ ಪ್ರೇಮ್ ಕುಮಾರ್ ಐಲ (ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ), ತಾಯಿ ಮೋಹಿನಿ, ಸಹೋದರ ವೈಶಾಕ್ ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಅಂತ್ಯ ಸಂಸ್ಕಾರ ನಿನ್ನೆ ಸಂಜೆ ಐಲ ಮನೆ ಪರಿಸರದಲ್ಲಿ ನಡೆಯಿತು. ಮನೆಗೆ ಸಂಘ ಪರಿ ವಾರದ …

ಶೋಚನೀಯಾವಸ್ಥೆಯಿಂದ ಸಂಚಾರ ಸಮಸ್ಯೆ: ಚೆರ್ಕಳ-ಜಾಲ್ಸೂರು ರಾಜ್ಯ ಹೆದ್ದಾರಿ ಚತುಷ್ಪಥಗೊಳಿಸಲು ಹೆಚ್ಚಿದ ಬೇಡಿಕೆ

ಮುಳ್ಳೇರಿಯ: ಕೇರಳ ಕರ್ನಾಟಕ ರಾಜ್ಯಗಳ ಪ್ರಧಾನ ನಗರ ಹಾಗೂ ಪ್ರವಾಸೋಧ್ಯಮ ವಲಯವನ್ನು ಜೋಡಿಸುವ ಚೆರ್ಕಳ- ಜಾಲ್ಸೂರು ರಾಜ್ಯ ಹೆದ್ದಾರಿ ೫೫ರಲ್ಲಿ ವಾಹನ ದಟ್ಟಣೆ ಹಾಗೂ ದುರಸ್ತಿ ಕೆಲಸಗಳ ಕೊರತೆಯಿಂದಾಗಿ ಹೆದ್ದಾರಿ ಶೋಚನೀಯಾವಸ್ಥೆಗೆ ತಲುಪಿದೆ ಎಂದು ಪ್ರಯಾಣಿಕರು ದೂರುತ್ತಾರೆ. ಅಂತಾರಾಜ್ಯ ಪ್ರಾಮುಖ್ಯತೆ ಇರುವ ಈ ರಸ್ತೆಯಲ್ಲಿ ದುರಸ್ತಿ ಕಾಮಗಾರಿ ನಡೆದು ಹಲವು ಕಾಲ ಕಳೆದಿರುವುದಾಗಿಯೂ ದೂರಲಾಗಿದೆ. ಕೇರಳ – ಕರ್ನಾಟಕ ರಾಜ್ಯಗಳ ಪ್ರಧಾನ ನಗರಗಳನ್ನು ಹಾಗೂ ಪ್ರವಾಸೋಧ್ಯಮ ವಲಯಗಳನ್ನು ಸಂಪರ್ಕಿಸುವ ಈ ರಸ್ತೆಯಲ್ಲಿ ವಾಹನದಟ್ಟಣೆ ಹಾಗೂ ಸರಕು ವಾಹನಗಳ …

ಆಹಾರ ಗಂಟಲಲ್ಲಿ ಸಿಲುಕಿ ಬಾಲಕ ಮೃತ್ಯು

ಕಾಸರಗೋಡು: ಆಹಾರ ಗಂಟಲಲ್ಲಿ ಸಿಲುಕಿ ಬಾಲಕ ಮೃತಪಟ್ಟ ದಾರುಣ ಘಟನೆ ನಡೆದಿದೆ. ಕುಂಡಂಕುಳಿ ನಿವಾಸಿ ಸಿದ್ದಿಕ್ ಸಖಾಫಿಯವರ  ಪುತ್ರ ಇಬ್ರಾಹಿಂ ಬಾತಿಷ (9) ಮೃತಪಟ್ಟ ದುರ್ದೈವಿಯಾಗಿದ್ದಾನೆ. ನಿನ್ನೆ ಸಂಜೆ ಮನೆಯಲ್ಲಿ ಆಹಾರ ಸೇವಿಸತ್ತಿದ್ದಾಗ ಗಂಟಲಲ್ಲಿ ಸಿಲುಕಿ ಬಾಲಕನಿಗೆ ಉಸಿರಾಟ ಸಮಸ್ಯೆ ಉಂಟಾಗಿತ್ತೆನ್ನ ಲಾಗಿದೆ. ಇದು ಗಮನಕ್ಕೆ ಬಂದ ತಕ್ಷಣ ಮನೆಯವರು ಬಾಲಕನನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಇಬ್ರಾಹಿಂ ಬಾತಿಷ ಬಡ್ಸ್ ಶಾಲೆ ವಿದ್ಯಾರ್ಥಿಯಾಗಿದ್ದಾನೆ.