ಕೂಂಬಾಳೆಯಲ್ಲಿ ಒತ್ತೆಕೋಲ 7ರಂದು

ಮುಳ್ಳೇರಿಯ: ಕಾರಡ್ಕ ಕೂಂಬಾಳೆಯಲ್ಲಿ ಶ್ರೀ ವಿಷ್ಣು ಮೂರ್ತಿ ದೈವದ ಒತ್ತೆಕೋಲ ಎ. ೭ರಂದು ವಿವಿಧ ಕಾರ್ಯಕ್ರಮ ಗಳೊಂದಿಗೆ ನಡೆಯ ಲಿದೆ. ಇದರಂಗವಾಗಿ ಎ. ೫ರಂದು ಮುಂಡೋಳು ಶ್ರೀ ಮಹಾವಿಷ್ಣು ದುರ್ಗಾಪರಮೇಶ್ವರಿ, ಶಾಸ್ತಾರ ಕ್ಷೇತ್ರದಲ್ಲಿ ಮಧ್ಯಾಹ್ನ ಬಲಿವಾಡು ಕೂಟ, ರಾತ್ರಿ ಪೂಜೆ ನಡೆಯಲಿದೆ.

೭ರಂದು ಬೆಳಿಗ್ಗೆ ಮೇಲೇರಿ ಸೇರಿಸುವುದು, ಸಂಜೆ ಮೇಲೇರಿಗೆ ಅಗ್ನಿ ಸ್ಪರ್ಶ, ಬಳಿಕ ಶ್ರೀ ವಿಷ್ಣುಮೂರ್ತಿ ದೈವದ ಕುಳಿಚ್ಚಾಟ, ಮರುದಿನ ಮುಂಜಾನೆ ದೈವದ ಅಗ್ನಿಸ್ನಾನ ನಡೆಯಲಿದೆ. ಒತ್ತೆಕೋಲ ಬಗ್ಗೆ ಚರ್ಚಿಸಲು ೫ರಂದು ಬೆಳಿಗ್ಗೆ ೧೦.೩೦ಕ್ಕೆ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯ ಮಹಾಸಭೆ ಮುಂಡೋಳು ಕ್ಷೇತ್ರದ ಸಭಾಂಗಣದಲ್ಲಿ ನಡೆಯಲಿದೆ.

You cannot copy contents of this page