85ನೇ ದಿನಕ್ಕೆ ಕಾಲಿಟ್ಟ ಅನಿರ್ಧಿಷ್ಟಾವಧಿ ಮುಷ್ಕರ: ಶಾಸಕರಿಂದ ಕಾಲ್ನಡೆ ಮೇಲ್ಸೇತುವೆ ಭರವಸೆ; ಸಮಿತಿಗೆ ಅತೃಪ್ತಿ

ಮಂಜೇಶ್ವರ : ಕಳೆದ ೮೫ ದಿವಸ ಗಳಿಂದ ಮಂಜೇಶ್ವರ ರಾಗಂ ಜಂಕ್ಷನಿ ನಲ್ಲಿ ಅಂಡರ್ ಪಾಸ್ ಬೇಡಿಕೆಯ ನ್ನಿಟ್ಟು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಅನಿರ್ಧಿ ಷ್ಟಾವಧಿ ಮುಷ್ಕರ ನಡೆಯುತ್ತಿದ್ದರೂ ಅಧಿಕಾರಿಗಳ ಭಾಗದಿಂದ, ಜನ ಪ್ರತಿನಿಧಿಗಳ ಭಾಗದಿಂದ ಯಾವುದೇ ಪ್ರತಿಕ್ರಿಯೆ ಲಭಿಸಿರಲಿಲ್ಲ.
ಈ ಹಿನ್ನೆಯಲ್ಲಿ ಅನಿರ್ಧಿಷ್ಟಾವಧಿ ಮುಷ್ಕರದ ೮೫ನೇ ದಿನ ವೇದಿಕೆಗೆ ಶಾಸಕ ಎ ಕೆ ಎಂ ಅಶ್ರಫ್ ಆಗಮಿಸಿ ಕಾಲ್ನಡೆ ಮೇಲ್ಸೇತುವೆಯನ್ನು ನಿರ್ಮಿಸಿ ಕೊಡಲು ತಯರಾಗಿರುವ ಬಗ್ಗೆ ಸಂದೇಶ ನೀಡಿದ್ದಾರೆ. ಯು ಎಲ್ ಸಿ ಸಿ ಅಧಿಕಾರಿಗಳಲ್ಲಿ ನಿರಂತರವಾಗಿ ನಡೆಸಿದ ಒತ್ತಾಯದ ಫಲವಾಗಿ ಗುತ್ತಿಗೆದಾರರು ಈ ಬೇಡಿಕೆಯನ್ನು ಒಪ್ಪಿರುವುದಾಗಿ ಅವರು ತಿಳಿಸಿದ್ದಾರೆ. ಆದರೆ ಇಲ್ಲಿಯ ಜನತೆಗೆ ಅಂಡರ್ ಪಾಸ್ ಆಗಲೇ ಬೇಕೆಂಬ ಒತ್ತಾಯ ಇರುವ ಕಾರಣ ಲೋಕ ಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕ ನೂತನ ಸಂಸದರೊAದಿಗೆ ಚರ್ಚಿಸಿ ಆ ಪ್ರಯತ್ನವನ್ನು ಕೂಡಾ ಮುಂದುವರಿಸಲಿರುವುದಾಗಿ ಶಾಸಕರು ಭರವಸೆ ನೀಡಿದ್ದಾರೆ. ಈ ಬಗ್ಗೆ ಪ್ರತಿ ಕ್ರಿಯಿಸಿದ ರಾ. ಹೆದ್ದಾರಿ ಹೋರಾಟ ಸಮಿತಿ ಪದಾಧಿಕಾರಿಗಳು ನಮಗೆ ಬೇಕಾಗಿರುವುದು ಕಾಲ್ನಡೆ ಅಂಡರ್ ಪಾಸ್ ಆಗಿದ್ದು, ಅದು ಸಿಗುವ ತನಕ ಪ್ರತಿಭಟನೆಯ ತೀವ್ರತೆ ಹೆಚ್ಚಿಸಲಿದ್ದೇವೆ. ಆದರೆ ಶಾಸಕರು ನೀಡಿದ ಸಂದೇಶ ವನ್ನು ಸ್ವಾಗತಿಸಿರುವುದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page