ಕಾಯರ್‌ಪದವಿನಲ್ಲಿ ಪೊಲೀಸ್ ಕಾರ್ಯಾಚರಣೆ ಕರ್ನಾಟಕ ಮದ್ಯ ಸಹಿತ ಓರ್ವ ಸೆರೆ

ಮುಳ್ಳೇರಿಯ: ನೆಟ್ಟಣಿಗೆ ಬಳಿಯ ಕಾಯರ್‌ಪದವಿನಲ್ಲಿ ಆದೂರು ಎಸ್‌ಐ ಅನುರೂಪ್ ನೇತೃತ್ವದ ಪೊಲೀಸರು ನಿನ್ನೆ ಸಂಜೆ ನಡೆಸಿದ  ಕಾರ್ಯಾಚರಣೆ ವೇಳೆ ಪಿಕಪ್ ಮಿನಿ ವ್ಯಾನ್‌ನಲ್ಲಿ ಸಾಗಿಸುತ್ತಿದ್ದ ಕರ್ನಾಟಕ ಮದ್ಯ ವಶಪಡಿಸಲಾಗಿದೆ. ಈ ಸಂಬಂಧ ಓರ್ವನನ್ನು ಬಂಧಿಸಲಾಗಿದೆ. ನೆಟ್ಟಣಿಗೆ ಗ್ರಾಮದ ಕಕ್ಕೆಬೆಟ್ಟು ಬಾಣ ಗದ್ದೆ  ನಿವಾಸಿ ಪ್ರಭಾಕರ ರಾವ್ ಬಿ.ಎಸ್ (70) ಬಂಧಿತ ವ್ಯಕ್ತಿಯೆಂದು ಪೊಲೀಸರು ತಿಳಿಸಿದ್ದಾರೆ.   ವಾಹನ ದಲ್ಲಿದ್ದ 180 ಮಿಲ್ಲಿಯ 48 ಪ್ಯಾಕೆಟ್, 90 ಮಿಲ್ಲಿಯ 90 ಪ್ಯಾಕೆಟ್ ಮದ್ಯ ವನ್ನು ವಶಪಡಿಸಲಾಗಿದೆಯೆಂದೂ ಪೊಲೀಸರು ತಿಳಿಸಿದ್ದಾರೆ.

ನಿನ್ನೆ ಸಂಜೆ 6.30ರ ವೇಳೆ ಕಾಯರ್‌ಪದವುನಲ್ಲಿ ಪಟ್ರೋಲಿಂಗ್ ನಡೆಸುತ್ತಿದ್ದ ವೇಳೆ ಸುಳ್ಯಪದವು ಭಾಗದಿಂದ ಆಗಮಿಸಿದ ಸೆಮಿ ಪಿಕಪ್ ವ್ಯಾನ್‌ನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಅದರಲ್ಲಿ ಮದ್ಯ ಪತ್ತೆಯಾಗಿದೆ. ಎರಡು ಪೆಟ್ಟಿಗೆಗಳ ಲ್ಲಾಗಿ ಮದ್ಯ ತುಂಬಿಸಿಡಲಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಾ ಚರಣೆ ನಡೆಸಿದ ತಂಡದಲ್ಲಿ ಎಸ್‌ಸಿ ಪಿಒ ಅಶೋಕನ್, ಸಿಪಿಒ ಶ್ರೀಜಿತ್, ಮಣಿಕಂಠನ್ ಎಂಬಿವರಿದ್ದರು.

You cannot copy contents of this page