ಬಾಲಕೃಷ್ಣ ಮಾಸ್ತರ್ ಅಣಂಗೂರು ನಿಧನ

ಕಾಸರಗೋಡು: ಅಣಂಗೂರು ನಿವಾಸಿ, ನಿವೃತ್ತ ಮುಖ್ಯೋ ಪಾಧ್ಯಾಯ ಬಾಲಕೃಷ್ಣ ಮಾಸ್ತರ್ (೮೭) ನಿಧನಹೊಂದಿದರು. ಧಾರ್ಮಿಕ, ಸಾಮಾಜಿಕ ಮುಂದಾಳು ವಾಗಿದ್ದ ಇವರು ಸಮಾಜ ಚಿಂತ ಕನೂ ಆಗಿದ್ದರು.  ವಯೋಸಹಜ ಅಸೌಖ್ಯ ಬಾಧಿತರಾಗಿದ್ದ ಇವರನ್ನು ದೇರಳಕಟ್ಟೆಯ ಆಸ್ಪತ್ರೆಯಲ್ಲಿ  ದಾಖಲಿಸಲಾಗಿತ್ತು. ಮೊನ್ನೆ ರಾತ್ರಿ ಅಲ್ಲಿ ನಿಧನ ಸಂಭವಿಸಿದೆ.

ಮೃತರು ಪತ್ನಿ ರಮಾಭಾ, ಮಕ್ಕಳಾದ ಸತೀಶ್ಚಂದ್ರ (ಉದ್ಯಮಿ ಬೆಂಗಳೂರು), ಪ್ರಕಾಶ್ಚಂದ್ರ, ನವೀನ್‌ಚಂದ್ರ, ರಾಜೇಶ್ಚಂದ್ರ, ಸಂಧ್ಯಾರಾಣಿ, ವಿದ್ಯಾವಾಣಿ, ಅಳಿಯ-ಸೊಸೆಯಂದಿರಾದ ವಾಮನ ರಾವ್ ಬೇಕಲ್, ಗಣೇಶ್ ಕುಮಾರ್, ಪದ್ಮಾವತಿ (ಅಧ್ಯಾಪಿಕೆ), ಶೈಲ, ಉಷಾಕಿರಣ, ದಯಾವತಿ, ಸಹೋದರರಾದ ಲಕ್ಷ್ಮೀ ನಾರಾಯಣ (ಮಂಗಳೂರು), ಚಂದ್ರಶೇಖರ, ಪಾಂಡುರಂಗ, ಜಗನ್ನಾಥ, ದುರ್ಗಾವತಿ (ಬೆಂಗಳೂರು), ನಳಿನಿ ಹಾಗೂ  ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page