ಕಾಸರಗೋಡು: ಕರಂದಕ್ಕಾಡು ಬಿಲ್ಲವ ಸೇವಾ ಸಂಘದ ಮಹಾಸಭೆ ಇಲ್ಲಿನ ನಾರಾಯಣಗುರು ಸಭಾಭವನದಲ್ಲಿ ನಡೆಯಿತು. ಬಿಲ್ಲವ ಸೇವಾ ಸಂಘ ಅಧ್ಯಕ್ಷ ಕೇಶವ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ, ಸಮಾಜಬಾಂಧವರು ಒಗ್ಗಟ್ಟಾಗಿ ಸಮಾಜದ ಏಳಿಗೆಗಾಗಿ ಕಾರ್ಯ ಪ್ರವೃತ್ತರಾಗಬೇಕು ಎಂದರು. ಹಿರಿಯ ಸದಸ್ಯ ರಘು ಮೀಪುಗುರಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಪ್ರೇಮಜಿತ್ ವರದಿ, ಕೋಶಾಧಿಕಾರಿ ಅಶೋಕ ಲೆಕ್ಕಪತ್ರ ಮಂಡಿಸಿದರು. ಧ್ವಜಾರೋಹಣದೊಂದಿಗೆ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಾಯಿತು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷ ರಾಗಿ ಕೇಶವ ಬೀರಂತಬೈಲು, ಅಧ್ಯಕ್ಷರಾಗಿ ರಘು ಮೀಪುಗುರಿ, ಉಪಾಧ್ಯಕ್ಷರುಗಳಾಗಿ ಸುಕೀರ್ತಿ, ಪ್ರೇಮಜಿತ್, ಹರೀಶ್ ಕೆ.ಆರ್, ಮಾಲತಿ, ಜಯಶೀಲ, ಪ್ರಧಾನ ಕಾರ್ಯದರ್ಶಿಯಾಗಿ ಹರಿಕಾಂತ್ ಕಾಸರಗೋಡು, ಜೊತೆ ಕಾರ್ಯದರ್ಶಿ ಗಳಾಗಿ ಮೈಂದಪ್ಪ, ಕಮಲಾಕ್ಷ, ಕೋಶಾಧಿಕಾರಿಯಾಗಿ ಶಮ್ಮಿ ಕುಮಾರ್ ಆಯ್ಕೆಯಾದರು. ಪ್ರೇಮಜಿತ್ ಸ್ವಾಗತಿಸಿ, ಹರೀಶ್ ಕೆ.ಆರ್. ವಂದಿಸಿದರು.
