ನಿವೃತ್ತ ಗ್ರಾಮಾಧಿಕಾರಿ ಸತ್ಯನಾರಾಯಣ ಅಗ್ಗಿತ್ತಾಯ ನಿಧನ

ಕಾಸರಗೋಡು: ನೆಲ್ಲಿಕುಂಜೆ ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ ಬಳಿಯ ನಿವಾಸಿ ನಿವೃತ್ತ ಗ್ರಾಮಾಧಿಕಾರಿ ಸತ್ಯನಾರಾಯಣ ಅಗ್ಗಿತ್ತಾಯ (78) ನಿಧನ ಹೊಂದಿದರು. ಖ್ಯಾತ ವಾಸ್ತುತಜ್ಞ ದಿ| ರಾಮ ಅಗ್ಗಿತ್ತಾಯರ ಪುತ್ರ ನಾಗಿರುವ ಮೃತ ಸತ್ಯನಾರಾಯಣ ಅಗ್ಗಿತ್ತಾಯರು ಕಾಸರಗೋಡು ಕೋಟೆ ಶ್ರೀಆಂಜನೇಯ ದೇವಸ್ಥಾನದ ಮೊಕ್ತೇಸರರೂ ಆಗಿದ್ದಾರೆ. ಮೃತರು ಪತ್ನಿ ಅನುರಾಧ, ಮಕ್ಕಳಾದ ಸುಪ್ರಿಯಾ ಸಂತೋಷ್  (ಅಮೆರಿಕ), ಶ್ರೀದೇವಿ ಅಭಿರಾಮ್ (ಬಹ್ರೈನ್), ದಿವ್ಯಲಕ್ಷ್ಮಿ (ಮಂಗಳೂರು) ಅಶ್ವಿನಿ ಅಜೆಯ್ (ಅಮೆರಿಕ) ಸಹೋದರಿಯರಾದ ಸರಸ್ವತಿ, ಸೀತಾರತ್ನ, ಕಲಾವತಿ, ಜಯಲಕ್ಷ್ಮಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page