ಬಸ್‌ಗಳಿಂದ ಡೀಸೆಲ್ ಕಳವು: ಓರ್ವ ಆರೋಪಿ ಕಸ್ಟಡಿಗೆ

ಕುಂಬಳೆ: ನಿಲ್ಲಿಸಿದ್ದ ಎರಡು ಬಸ್‌ಗಳಿಂದ  285ಲೀಟರ್ ಡೀಸೆಲ್ ಕಳವುಗೈದ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಕುಂಬಳೆ ಪೊಲೀಸರು ಕಸ್ಟಡಿಗೆ ತೆಗೆದುಕೊಂ ಡಿದ್ದಾರೆ. ಕಟ್ಟತ್ತಡ್ಕ ನಿವಾಸಿ ಶುಕೂರ್ (38) ಎಂಬಾತ ಕಸ್ಟಡಿ ಯಲ್ಲಿರು ವುದಾಗಿ ಪೊಲೀಸರು ತಿಳಿಸಿದ್ದಾರೆ. ಈತ ಕಳವುಗೈದ ಡೀಸೆಲ್‌ನ್ನು ಮಾರಾಟಗೈಯ್ಯುವ ವ್ಯಕ್ತಿಯಾಗಿದ್ದಾನೆ. ಬಸ್‌ಗಳಿಂದ ಡೀಸೆಲ್ ಕಳವುಗೈದ ಆರೋಪಿ ಗಳು  ಕರ್ನಾಟಕದಲ್ಲಿ ತಲೆಮರೆಸಿ ಕೊಂಡಿದ್ದಾರೆ. ಅವರಿಗಾಗಿ ಶೋಧ ನಡೆಸಲಾಗುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.  ಕಳೆದ ಶುಕ್ರವಾರ ರಾತ್ರಿ ಕುಂಬಳೆ-ಬದಿಯಡ್ಕ ರಸ್ತೆಯಲ್ಲಿರುವ ಭಾರತ್ ಪೆಟ್ರೋಲ್ ಬಂಕ್‌ನ ಮುಂದೆ ನಿಲ್ಲಿಸಿದ್ದ  ಗುರುವಾ ಯೂರಪ್ಪನ್ ಬಸ್‌ನಿಂದ ೧೫೦ ಲೀಟರ್ ಹಾಗೂ ಅರಿಯಪ್ಪಾಡಿ ಬಸ್‌ನಿಂದ ೧೩೫ ಲೀಟರ್ ಡೀಸೆಲ್ ಕಳವು ನಡೆದಿತ್ತು.

You cannot copy contents of this page