ವಿವಾಹ ನಿರಾಕರಣೆ: ಯುವಕನಿಗೆ ಪ್ರಿಯತಮೆಯಿಂದ ಇರಿತ

ಮುಂಬಯಿ: ವಿವಾಹವಾಗಲು ನಿರಾಕರಿಸಿದ ಯುವಕನಿಗೆ ಪ್ರಿಯತಮೆ ಕತ್ತಿಯಿಂದ ಕಡಿದು ಗಾಯಗೊಳಿಸಿದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬೀವಂಡಿಯಲ್ಲಿ ಸಂಭವಿಸಿದೆ. 26ರ ಹರೆಯದ ಯುವತಿ ಪ್ರಿಯತಮನ ಗುಹ್ಯ ಭಾಗಕ್ಕೆ ಕತ್ತಿಯಿಂದ ಇರಿದು ಗಾಯಗೊಳಿಸಿದ್ದಾಳೆ. ಯುವತಿಯ ಮನೆಯಲ್ಲಿ ಈ ತಿಂಗಳ 16ರಂದು ಘಟನೆ  ನಡೆದಿದೆ. ತನ್ನನ್ನು ವಿವಾಹ ವಾಗಬೇಕೆಂದು ಪ್ರಿಯತಮೆ ಬೇಡಿಕೆ ಮುಂದಿಟ್ಟಾಗ ಯುವಕ ಅದನ್ನು ನಿರಾಕರಿಸಿದ್ದನು. ಈ ಹಿನ್ನೆಲೆಯಲ್ಲಿ ಅಡುಗೆ ಕೋಣೆಯಿಂದ ಕತ್ತಿ ತಂದು ಯುವಕನಿಗೆ ಇರಿದು ಗಾಯಗೊಳಿಸಿ ರುವುದಾಗಿ ತಿಳಿದು ಬಂದಿದೆ. ಗಾಯಗೊಂಡ ಯುವಕ ಮನೆಯಿಂದ ಓಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಪೊಲೀಸರಿಗೆ ದೂರು ನೀಡಿದ್ದಾನೆ. ಈ ಹಿನ್ನೆಲೆಯಲ್ಲಿ ಯುವತಿ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page