ಚಿನ್ಮಯ ವಿದ್ಯಾಲಯದ ಚಿನ್ಮಯ ಫೆಸ್ಟ್‌ಗೆ ಚಾಲನೆ

ವಿದ್ಯಾನಗರ: ಕಾಸರಗೋಡು ಚಿನ್ಮಯ ವಿದ್ಯಾಲಯದಲ್ಲಿ ಎರಡು ದಿನದ ಚಿನ್ಮಯ ಫೆಸ್ಟ್ ಆರಂಭಗೊಂಡಿತು. ಚಿನ್ಮಯ ಮಿಷನ್ ಕೇರಳ ಘಟಕ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತಿ ದೀಪ ಬೆಳಗಿಸಿದರು.  ರಂಗನಟ ಕಾಸರಗೋಡು ಚಿನ್ನಾ ಉದ್ಘಾಟಿಸಿದರು. ವಿದ್ಯಾರ್ಥಿಗಳ ಸಾಮರ್ಥ್ಯವನ್ನು ತಿಳಿದುಕೊಂಡು ಅವರಿಗೆ ಬೆಳೆಯಲಿರುವ ಸನ್ನಿವೇಶವನ್ನು  ಪ್ರತೀ ವಿದ್ಯಾಲಯ ಸಿದ್ಧಪಡಿಸಬೇಕಾಗಿದೆ ಎಂದು ಅವರು ನುಡಿದರು. ಪ್ರಾಂಶುಪಾಲ ಕೆ.ಸಿ. ಸುನಿಲ್ ಕುಮಾರ್, ಬಿ. ಪ್ರಶಾಂತ್ ಶುಭ ಕೋರಿದರು. ಕಾರ್ಯದರ್ಶಿ ದಿಶಾ ಚೈತನ್ಯ, ಮುಖ್ಯೋಪಾಧ್ಯಾಯರಾದ ಪೂರ್ಣಿಮ ಎಸ್.ಆರ್, ಸಿಂಧು ಶಶೀಂದ್ರನ್, ಅಧ್ಯಾಪಕರು, ನೌಕರರು, ಹೆತ್ತವರು ಸಹಿತ ಹಲವರು ಭಾಗವಹಿಸಿದರು. ವಿದ್ಯಾರ್ಥಿ ಸಿದ್ಧಾರ್ಥ್ ಸ್ವಾಗತಿಸಿ, ಅಕ್ಬರ್ ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page