ಶಿವಾಜಿ ನಗರ, ಹನುಮಾನ್ ನಗರಗಳಲ್ಲಿ ವ್ಯಾಪಕಗೊಂಡ ಕಡಲ್ಕೊರೆತ: ಶೆಡ್ಡ್ ಸಮುದ್ರ ಪಾಲು

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಶಿವಾಜಿ ನಗರ ಬಂಗ್ಲ, ಹನುಮಾನ್ ನಗರದಲ್ಲಿ ಮತ್ತೆ ಕಡಲ್ಕೊರೆತ ವ್ಯಾಪಕಗೊಂಡಿದ್ದು, ಮೀನುಗಾರರ ಹಲವು ಮನೆಗಳು ಅಪಾಯದಂಚಿನಲ್ಲಿದೆ. ಕಳೆದೆರಡು ದಿನಗಳಿಂದ ಕಡಲ್ಕೊರೆತ ತೀವ್ರಗೊಂಡಿದೆ. ಶಿವಾಜಿ ನಗರದ ಬಂಗ್ಲ ಎಂಬಲ್ಲಿ ಮೀನುಗಾರರು ಬಲೆ ಸಂಗ್ರಹಿಸಿಡುತ್ತಿದ್ದ ಶೆಡ್ಡ್ ಸಮುದ್ರ ಪಾಲಾಗಿದೆ. ಇದೇ ಪರಿಸರದಲ್ಲಿ ಆರು ಮಂದಿ ಮೀನುಗಾರರ ಮನೆ ಅಪಾಯದಂಚಿನಲ್ಲಿದೆ. ತೆಂಗಿನ ಮರಗಳು ಸಮುದ್ರ ಪಾಲಾಗಿವೆ. ಹನುಮಾನ್ ನಗರದಲ್ಲಿ ರಸ್ತೆ ಸಮುದ್ರ ಪಾಲಾದ ಕಾರಣ ಮೀನು ಕಾರ್ಮಿಕರ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ. ಮಣಿಮುಂಡ, ಮುಸೋಡಿ ಪರಿಸರದಲ್ಲೂ ಕಡಲ್ಕೊರೆತ ಮುಂದವರಿಯುತ್ತಿದೆ.

ಶಿವಾಜಿ ನಗರ ಬಂಗ್ಲ, ಹನುಮಾನ್ ನಗರ ಮೊದಲಾದ ಕಡಲ್ಕೊರೆತ ಪ್ರದೇಶಗಳಿಗೆ ನಿನ್ನೆ ತಹಶೀಲ್ದಾರ್ ಸಹಿತ ಅಧಿಕಾರಿಗಳು, ಬಿಜೆಪಿ ಮುಖಂಡರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಬಿಜೆಪಿ ಮುಖಂಡರಾದ ವಿಜಯ ರೈ, ವಸಂತ ಕುಮಾರ್ ಮಯ್ಯ, ಭರತ್ ರೈ, ಅನಿಲ್ ಐಲ ಸಹಿತ ಸ್ಥಳೀಯರು ಸ್ಥಳಕ್ಕೆ ಭೇಟಿ ನೀಡಿದರು.

Leave a Reply

Your email address will not be published. Required fields are marked *

You cannot copy content of this page