ಚಪ್ಪರ ಬಿಚ್ಚುವ ಮಧ್ಯೆ ಶಾಕ್ ತಗಲಿ ಮೂವರು ಮೃತ್ಯು

ಆಲಪ್ಪುಳ: ಎಸ್ ಎನ್‌ಡಿಪಿ ಯೋಗಂ ಉಪಾಧ್ಯಕ್ಷ ತುಷಾರ್ ವೆಳ್ಳಾಪಳ್ಳಿಯವರ ಪುತ್ರಿಯ ವಿವಾಹ ಸಂಬಂಧ ಹಾಕಿದ್ದ ಚಪ್ಪರವನ್ನು ಬಿಚ್ಚುವಾಗ ಶಾಕ್ ತಗಲಿ ಮೂರು ಮಂದಿ ಅನ್ಯರಾಜ್ಯ ಕಾರ್ಮಿಕರು ನಿಧನರಾಗಿದ್ದಾರೆ. ಮೂರು ಮಂದಿಗೆ ಗಂಭೀರ ಗಾಯವುಂಟಾಗಿದೆ. ಬಿಹಾರ ನಿವಾಸಿಗಳಾದ ಆದಿತ್ಯನ್, ಕಾಶಿರಾಂ, ಪಶ್ಚಿಮಬಂಗಾಲದ ಧನಂಜಯನ್ ಮೃತಪಟ್ಟವರಾದರೆ, ಜಾದುಲಾಲ್, ಅನೂಪ್, ಜಯನ್ (ಇವರೆಲ್ಲ ಬಿಹಾರ ನಿವಾಸಿಗಳು) ಗಾಯ ಗೊಂಡಿದ್ದಾರೆ. ಚಪ್ಪರ ತೆಗೆಯುವಾಗ ಕಬ್ಬಿಣದ ಸರಳು  ತಂತಿಗೆ ತಾಗಿರುವುದೇ ದುರಂತಕ್ಕೆ ಕಾರಣವಾಗಿರುವುದಾಗಿ ಹೇಳ ಲಾಗುತ್ತಿದೆ.

Leave a Reply

Your email address will not be published. Required fields are marked *

You cannot copy content of this page