ವರ್ಕಾಡಿ ಪಂ.ನಲ್ಲಿ ಬಸ್ ರೂಟ್ ಮಂಜೂರು ಮಾಡಲು ಮನವಿ

ವರ್ಕಾಡಿ: ಪಂಚಾಯತ್ ವ್ಯಾಪ್ತಿಯ ಕೆಲವು ಪ್ರದೇಶಗಳಿಗೆ ಬಸ್ ರೂಟ್ ಮಂಜೂರು ಗೊಳಿಸಬೇಕೆಂದು ಆಗ್ರಹಿಸಿ ಪಂ. ಸದಸ್ಯ ಅಬ್ದುಲ್ ಮಜೀದ್ ರಾಜ್ಯ ಸಾರಿಗೆ ಸಚಿವ ಹಾಗೂ ಶಾಸಕ ಎಕೆಎಂ ಅಶ್ರಫ್‌ರಿಗೆ ಮನವಿ ನೀಡಿದ್ದಾರೆ. ಮೀಯಪದವಿನಿಂದ ಸುಂಕದಕಟ್ಟೆ ದಾರಿಯಾಗಿ ಮುಡಿಪುಗೆ, ಮಂಜೇಶ್ವರ ಬಾಕ್ರಬೈಲು ರೂಟ್‌ನಲ್ಲೂ, ಪಾತೂರು ಪೊಯ್ಯತ್ತಬೈಲ್ ದಾರಿಯಾಗಿ ಕಾಸರಗೋಡಿಗೆ ಬಸ್ ರೂಟ್ ಮಂಜೂರು ಮಾಡಬೇಕೆಂದು ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page