ಫೋನ್ ಕರೆ ಬಂದ ಬೆನ್ನಲ್ಲೇ ಯುವಕನಿಗೆ ಒಂದೂವರೆ ಲಕ್ಷ ರೂ. ನಷ್ಟ

ಕಾಸರಗೋಡು: ಸಾಲ ಬೇಕೇ ಎಂದು ಕೇಳಿ ಫೋನ್ ಕರೆ ಬಂದ ಬೆನ್ನಲ್ಲೇ ಯುವಕನಿಗೆ ಒಂದೂವರೆ ಲಕ್ಷ ರೂಪಾಯಿ ನಷ್ಟಗೊಂಡ ಘಟನೆ ನಡೆದಿದೆ. ತೆಕ್ಕಿಲ್ ಬೆಂಡಿಚ್ಚಾಲ್‌ನ ಬಿ.ಎ. ಹಾರೀಸ್‌ರ ದೂರಿನಂತೆ ಮೇಲ್ಪರಂಬ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಕಳೆದ ಜುಲೈ ೧೩ರಂದು ಹಾರೀಸ್‌ರ ಫೋನ್‌ಗೆ ಕರೆಯೊಂದು ಬಂದಿದ್ದು, ಸಾಲ ಬೇಕೇ ಎಂದು ಕೇಳಲಾಗಿದೆ. ಅನಂತರ ದೂರುದಾರನ ಖಾತೆಯಿಂದ ಹಲವು ಬಾರಿಯಾಗಿ ೧,೬೬,೯೯೦ ರೂಪಾಯಿ ವಿವಿಧ ಯುಪಿಐ ವ್ಯವಹಾರಗಳ ಮೂಲಕ ಲಪಟಾಯಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆನ್‌ಲೈನ್ ವಂಚನೆಗಳ ವಿರುದ್ಧ ಜಾಗ್ರತೆ ಪಾಲಿಸುವಂತೆ ಪೊಲೀಸರು ಮುನ್ನೆಚ್ಚರಿಕೆ ನೀಡುತ್ತಿದ್ದರೂ ವಂಚನೆ ವ್ಯಾಪಕಗೊಂಡಿರುವುದು ನಾಗರಿಕರಲ್ಲಿ ಆತಂಕ ಮೂಡಿಸಿದೆ.

RELATED NEWS

You cannot copy contents of this page