ಪಿಕಪ್‌ಗೆ ಬಸ್ ಢಿಕ್ಕಿ: ಪಿಕಪ್ ಚಾಲಕ ಮೃತ್ಯು

ಪೆರ್ಲ: ಅಡ್ಕಸ್ಥಳದಲ್ಲಿ ಪಿಕಪ್ ಗೆ ಕರ್ನಾಟಕ ಸರಕಾರಿ ಬಸ್ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತ ದಲ್ಲಿ ಓರ್ವ ಮೃತಪಟ್ಟಿದ್ದು, ಇನ್ನೋರ್ವರು ಗಾಯಗೊಂಡಿ ದ್ದಾರೆ. ಟೆಂಪೋ ಚಾಲಕ ಮಣಿಯಂ ಪಾರೆ ನಿವಾಸಿ ಮುಸ್ತಫ ತಜ್ಜಾನ (೪೩) ಮೃತಪಟ್ಟವರು. ನಿನ್ನೆ ಬೆಳಿಗ್ಗೆ ಎದುರು ಭಾಗದಿಂದ ಬಂದ ಕಾರೊಂದನ್ನು ತಪ್ಪಿಸುವ ವೇಳೆ ಬಸ್ ಅಡಿಕೆ ಸಸಿಗಳನ್ನು ಹೇರಿಕೊಂಡು ಬರುತ್ತಿದ್ದ ಪಿಕಪ್‌ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದರಿಂ ದಾಗಿ ಚಾಲಕನ ತಲೆಗೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಪಿಕಪ್‌ನಲ್ಲಿದ್ದ ಇನ್ನೋರ್ವರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

You cannot copy contents of this page