ಬಾಲಕನಿಗೆ ಸಲಿಂಗರತಿ ಕಿರುಕುಳ: ಮದ್ರಸಾ ಅಧ್ಯಾಪಕ ಸೆರೆ

ಕಾಸರಗೋಡು: ಪ್ರಾಯ ಪೂರ್ತಿಯಾಗದ ಬಾಲಕನಿಗೆ ಸಲಿಂ ಗರತಿ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಮದ್ರಸಾ ಅಧ್ಯಾಪಕ ನನ್ನು ಚಂದೇರ ಪೊಲೀಸರು ಬಂಧಿಸಿದ್ದಾರೆ. ಪೆರಿಯ ಕುಣಿಯ ನಿವಾಸಿ ಹಾಗೂ ಪಡನ್ನದ ಮದ್ರಸವೊಂದರ ಅಧ್ಯಾಪಕ ಎನ್.ಎ. ಮೊಹಮ್ಮದ್ ಶಾಹೀದ್ (೨೭) ಬಂಧಿತನಾದ ಆರೋಪಿ.‘ಸಕಾತ್’ ಪಡೆಯಲೆಂದು  ಬಂದ ಬಾಲಕನೋರ್ವನಿಗೆ ಕಳೆದ ಎಪ್ರಿಲ್ ೮ರಂದು ಈ ಅಧ್ಯಾಪಕ ಪಡನ್ನದಲ್ಲಿರುವ ಆತನ ಕೊಠಡಿ ಯೊಳಗೂ, ನಂತರ ಎ.೧೯ರಂದು ಕಾಸರಗೋಡು ರೈಲು ನಿಲ್ದಾಣ ಪರಿಸರದ ಕೊಠಡಿಯೊಂದಕ್ಕೆ ಕರೆಸಿ ಅಲ್ಲೂ ಸಲಿಂಗರತಿ ಕಿರುಕುಳ ನೀಡಿ ರುವುದಾಗಿ ಆ ಬಾಲಕ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ಆರೋ ಪಿಸಿದ್ದಾನೆ. ಅದರಂತೆ ಚಂದೇರ ಪೊಲೀಸರು ಈ ಮದ್ರಸಾ ಅಧ್ಯಾ ಪಕನ ವಿರುದ್ಧ ಪೋಕ್ಸೋ ಕಾನೂನು ಪ್ರಕಾರ  ಪ್ರಕರಣ ದಾಖಲಿಸಿದ ಬಳಿಕ ಆತನನ್ನು ಬಂಧಿಸಿದ್ದಾರೆ. ಆರೋಪಿಯನ್ನು ನಂತರ ನ್ಯಾಯಾ ಲಯ ನಿರ್ದೇಶದಂತೆ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ

Leave a Reply

Your email address will not be published. Required fields are marked *

You cannot copy content of this page