ಡಿವೈಎಫ್ಐ ಸಮಿತಿಯಿಂದ ಮಂಗಲ್ಪಾಡಿ ಪಂ. ಕಚೇರಿ ಮಾರ್ಚ್
ಉಪ್ಪಳ: ವಯನಾಡು ಸಂತ್ರಸ್ತರಿಗಾಗಿ ಸಂಗ್ರಹಿಸಿದ ಕಿಟ್ ಮಾರಾಟ ಮಾಡಿರುವುದಾಗಿ ಆರೋಪಿಸಿ ಮಂಗಲ್ಪಾಡಿ ಪಂ ಚಾಯತ್ ಯುಡಿಎಫ್ ಆಡಳಿತ ಸಮಿತಿ ವಿರುದ್ಧ ಡಿವೈಎಫ್ಐ ಮಂಜೇಶ್ವರ ಬ್ಲೋಕ್ ಸಮಿತಿ ನೇತೃತ್ವದಲ್ಲಿ ಪಂಚಾಯತ್ ಕಚೇರಿಗೆ ನಿನ್ನೆ ಮಾರ್ಚ್ ನಡೆಸಲಾಯಿತು. ಡಿವೈಎಫ್ಐ ಮಂಜೇಶ್ವರ ಏರಿಯಾ ಕಾರ್ಯದರ್ಶಿ ವಿ.ವಿ. ರಮೇಶನ್ ಉದ್ಘಾಟಿಸಿದರು. ಬ್ಲೋಕ್ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಜೊತೆ ಕಾರ್ಯದರ್ಶಿ ಸಾದಿಕ್ ಚೆರುಗೋಳಿ, ಬ್ಲೋಕ್ ಸಮಿತಿ ಉಪಾಧ್ಯಕ್ಷ ಮುಹಮ್ಮದ್ ಹನೀಫ್, ಉಪ್ಪಳ ವಿಲ್ಲೇಜ್ ಕಾರ್ಯದರ್ಶಿ ದೀಕ್ಷಿತ್ ಉಪ್ಪಳ ಮಾತನಾಡಿದರು. ಬ್ಲೋಕ್ ಕಾರ್ಯದರ್ಶಿ ಹಾರಿಸ್ ಪೈವಳಿಕೆ ಸ್ವಾಗತಿಸಿದರು.