ಆಯುಷ್ಮಾನ್‌ಭವ ಹೆಲ್ತ್ ಐಡಿ ನೋಂದಾವಣೆ

ಬದಿಯಡ್ಕ: ಭಾರತೀಯ ಜನತಾ ಪಕ್ಷದ ಬದಿಯಡ್ಕ ಪೂರ್ವ ಸಮಿತಿಯ ನೇತೃತ್ವದಲ್ಲಿ ಆಯುಷ್ಮಾನ್ ಭವ ಹೆಲ್ತ್ ಐಡಿ ರಿಜಿಸ್ಟ್ರೇಷನ್ ಕ್ಯಾಂಪ್ ನಡೆಯಿತು. ಬಿಜೆಪಿ ಬದಿಯಡ್ಕ ಮಂಡಲ ಅಧ್ಯಕ್ಷ ಹರೀಶ್ ನಾರಂಪಾಡಿ ದೀಪ ಬೆಳಗಿಸಿ ಉದ್ಘಾಟಿಸಿದರು ಪೂರ್ವ ಸಮಿತಿಯ ಅಧ್ಯಕ್ಷ ಭಾಸ್ಕರ ಬಿ ಅಧ್ಯಕ್ಷತೆ ವಹಿಸಿದ್ದರು. ನೇತಾರರಾದ ಸುನಿಲ್ ಪಿ ಆರ್ ನಾರಾಯಣ ಮಾಸ್ಟರ್ ಭಾಗವಹಿಸಿದ್ದರು. ಅವಿನಾಶ್ ಸ್ವಾಗತಿಸಿ ಬಾಲಕೃಷ್ಣ ಶೆಟ್ಟಿ ವಂದಿಸಿದರು.

You cannot copy contents of this page