ಹೊಳೆಯಿಂದ ಹೊಯ್ಗೆ ಸಾಗಿಸಲು ರಸ್ತೆ ಸೌಕರ್ಯ : ಸ್ಥಳದ ಮಾಲಕನ ವಿರುದ್ಧ ಕೇಸು

ಕುಂಬಳೆ: ಅನಧಿಕೃತವಾಗಿ ಹೊಯ್ಗೆ ಸಾಗಿಸಲು ಹೊಳೆ ಬದಿಗೆ ರಸ್ತೆ ಸೌಕರ್ಯ ಒದಗಿಸಿಕೊಟ್ಟ ಸ್ಥಳದ ಮಾಲಕನ ವಿರುದ್ಧ ಕೇಸು ದಾಖಲಿಸಲಾಗಿದೆ. ಇಚ್ಚಿಲಂಗೋಡು ಕಕ್ಕಡ ಜಾರ ಬಳಿಯ ಸುಧೀಶ್ಚಂದ್ರ ಕಲ್ಪಾರ (55) ಎಂಬಾತನ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿ ಸಿದ್ದಾರೆ. ಇಚ್ಚಿಲಂಗೋಡು ಕಕ್ಕಡಜಾರ ಬಳಿಯ ಹೊಳೆಯಿಂದ ಹೊಯ್ಗೆ ಅನಧಿಕೃತವಾಗಿ ವ್ಯಾಪಕ ಸಾಗಾಟ ನಡೆಯುತ್ತಿದೆಯೆನ್ನಲಾಗಿದೆ. ಹೊಯ್ಗೆ ಸಾಗಿಸಲು ಹೊಳೆ ಬದಿಗೆ ರಸ್ತೆ ನಿರ್ಮಿ ಸಲು ಸ್ಥಳ ಒದಗಿಸಿಕೊಟ್ಟ ಆರೋಪ ದಂತೆ ಕೇಸು ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page