ತೆಂಗಿನಮರದಿಂದ ಬಿದ್ದು ಕಾರ್ಮಿಕ ಮೃತ್ಯು
ಕಾಸರಗೋಡು: ತೆಂಗಿನ ಮರವೇ ರುವ ಕಾರ್ಮಿಕ ತೆಂಗಿನ ಮರದಿಂದ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಕುತ್ತಿಕ್ಕೋಲ್ ಪಂಚಾಯತ್ 11ನೇ ವಾರ್ಡ್ಗೊಳಪಟ್ಟ ಕರಿವೇಡಗಂ ಪಳ್ಳಕ್ಕಾಡ್ನಲ್ಲಿ ವಾಸಿಸುವ ಟಿ. ಗೋಪಾಲನ್ (58) ಮೃತಪಟ್ಟ ವ್ಯಕ್ತಿ. ನಿನ್ನೆ ಬೆಳಿಗ್ಗೆ ಚುಳುಪ್ಪಿಲ್ ಕಂಡೋತ್ ಎಂಬಲ್ಲಿ ಲಿಬಿ ಎಂಬವರ ತೋಟದಲ್ಲಿ ತೆಂಗಿನ ಕಾಯಿ ಕೊಯ್ಯಲೆಂದು ತಲುಪಿದ್ದರು. ತೆಂಗಿನ ಮರದಿಂದ ಬಿದ್ದು ಗಾಯ ಗೊಂಡ ಗೋಪಾಲನ್ರನ್ನು ಕೂಡಲೇ ಬೇಡಗಂನ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತದೇಹದ ಮರಣೋತ್ತರ ಪರೀಕ್ಷೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ನಡೆಸಲಾ ಯಿತು. ಮೃತರು ಪತ್ನಿ ಶಕುಂತಳ, ಮಕ್ಕಳಾದ ಶರತ್, ಶರಣ್ಯ, ಸಂಜಯ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.