ಯುವಕ ದುಬಾಯಿಯಲ್ಲಿ ಹೃದಯಾಘಾತದಿಂದ ನಿಧನ
ಕಾಸರಗೋಡು: ಉದುಮ ಮಾಂಙಾಡ್ ನಿವಾಸಿ ದುಬಾಯಿಯಲ್ಲಿ ಹೃದಯಾಘಾತದಿಂದ ಮೃತಪಟ್ಟರು. ಮಾಂಙಾಡ್ ಅಂಬಾಪುರ ರಸ್ತೆ ನಿವಾಸಿ ಪಾಕ್ಯಾರ ಮಾಂಙಾಡನ್ ಹಸೈನಾರ್- ರಾಹಿಲ ದಂಪತಿಯ ಪುತ್ರ ರಕೀಬ್ (25) ಮೃತ ಪಟ್ಟ ವ್ಯಕ್ತಿ. ದುಬಾಯಿಯ ಕಂಪೆನಿಯೊಂದರಲ್ಲಿ ಇವರು ಅಕೌಂಟೆಂಟ್ ಆಗಿ ಕೆಲಸ ನಿರ್ವಹಿಸು ತ್ತಿದ್ದರು. ಮೃತದೇಹವನ್ನು ಊರಿಗೆ ತಲುಪಿಸಲು ಕ್ರಮ ಆರಂಭಿಸಲಾಗಿದೆ. ಮೃತರು ತಂದೆ, ತಾಯಿ, ಸಹೋದರ ರಾದ ಶಫೀಕ್, ತೌಫೀಕ್ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.