ನಿಲುಗಡೆ ಸ್ಥಳದಲ್ಲಿ ಬಸ್‌ಗಳನ್ನು ನಿಲ್ಲಿಸುತ್ತಿಲ್ಲವೆಂದು ಆರೋಪಿಸಿ ವಿದ್ಯಾರ್ಥಿನಿಯರಿಂದ ಬಸ್‌ಗಳಿಗೆ ತಡೆ

ಕುಂಬಳೆ: ನಿಲು ಗಡೆ ಸ್ಥಳದಲ್ಲಿ ಬಸ್ ನಿಲ್ಲಿಸುವು ದಿಲ್ಲ ವೆಂದು ಆರೋಪಿಸಿ ವಿದ್ಯಾರ್ಥಿನಿಯರು ಬಸ್‌ಗಳಿಗೆ ತಡೆ ಯೊಡ್ಡಿದ ಘಟನೆ ನಡೆದಿದೆ. ಈ ಘಟನೆ ಕುಂಬಳೆ ಪೇಟೆಯಲ್ಲಿ ಕೂಡಾ ಪುನರಾವರ್ತಿಸಿದ್ದು, ಇದರಿಂದ ಪೊಲೀ ಸರು ಮಧ್ಯೆ ಪ್ರವೇ ಶಿಸಿ ಸಮಸ್ಯೆಗೆ ಪರಿ ಹಾರ ಕಾಣು ವುದಾಗಿ  ಭರವಸೆ ನೀಡಿದ್ದಾರೆ.

ಕುಂಬಳೆ ಭಾಸ್ಕರನಗರ ಸಮೀಪ  ಖಾಸಗಿ ಮಹಿಳಾ ಕಾಲೇಜಿನ ಮುಂದೆ ಆರ್‌ಟಿಒ ನಿಲುಗಡೆ ಮಂಜೂರು ಮಾಡಿರುವುದಾಗಿ ಹೇಳಲಾಗುತ್ತಿದೆ. ಪ್ರಸ್ತುತ ಸ್ಥಳದಲ್ಲಿ ರಸ್ತೆ ಅಭಿವೃದ್ಧಿ ನಡೆದು ಕೆಎಸ್‌ಟಿಪಿ ಅಧಿಕಾರಿಗಳು ವೈಟಿಂಗ್ ಶೆಡ್ ನಿರ್ಮಿಸಿದ್ದರು. ಆದರೆ ಈ ನಿಲುಗಡೆ ಸ್ಥಳದಲ್ಲಿ ಬಸ್‌ಗಳನ್ನು ನಿಲ್ಲಿಸುತ್ತಿಲ್ಲ ವೆಂದು ಆರೋಪಿಸಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ನಿನ್ನೆ ಸಂಜೆ ಈ ರಸ್ತೆಯಲ್ಲಿ ಬಂದ ಬಸ್‌ಗಳಿಗೆ ತಡೆಯೊಡ್ಡಿದ್ದಾರೆ. ಅನಂ ತರ ವಿದ್ಯಾರ್ಥಿನಿಯರು ಕುಂಬಳೆಗೆ ತಲುಪಿ ಬಸ್ ನೌಕರರೊಂದಿಗೆ ವಾಗ್ವಾದ ನಡೆಸಿದ್ದು, ಈ ವೇಳೆ ಇತರ ವಿದ್ಯಾರ್ಥಿಗಳೂ ಅದರಲ್ಲಿ ಸೇರಿಕೊಂಡಿದ್ದಾರೆ. ಇದರಿಂದ ಸಮಸ್ಯೆ ತೀವ್ರಗೊಂಡಿದ್ದು, ವಿಷಯ ತಿಳಿದು ತಲುಪಿದ ಪೊಲೀಸರು ಸಮಸ್ಯೆಗೆ ಪರಿಹಾರ ಕಾಣುವುದಾಗಿ ವಿದ್ಯಾರ್ಥಿನಿಯರಿಗೆ ಭರವಸೆ ನೀಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page