ವರ್ಕಾಡಿ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ-ಆಪರೇಟಿವ್ ಸೊಸೈಟಿ ನೂತನ ಕಟ್ಟಡ ಉದ್ಘಾಟನೆ

ಮಂಜೇಶ್ವರ: ವರ್ಕಾಡಿ ಅಗ್ರಿಕಲ್ಚರಿಸ್ಟ್  ವೆಲ್ಫೇರ್ ಕೋ ಆಪರೇಟಿವ್ ಸೊಸೈಟಿಯ ಮಜೀರ್‌ಪಳ್ಳದಲ್ಲಿನ ನೂತನ ಕಟ್ಟಡದ ಉದ್ಘಾಟನೆಯನ್ನು ನಿನ್ನೆ ಶಾಸಕ ಎಕೆಎಂ ಅಶ್ರಫ್ ನೆರವೇರಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿ ಕೌಂಟರ್ ಉದ್ಘಾಟನೆ ಮಾಡಿದರು. ಬ್ಯಾಂಕ್‌ನ ಅಧ್ಯಕ್ಷ ವಿಶ್ವನಾಥ ಕುದುರು ಧ್ವಜಾರೋಹಣ ನೆರವೇರಿಸಿ ಸ್ವಾಗತಿಸಿದರು. ಠೇವಣಿ ಸ್ವೀಕಾರವನ್ನು ಕೋ ಓಪರೇಟಿವ್ ಸೊಸೈಟಿ ಡೆಪ್ಯುಟಿ ರಿಜಿಸ್ಟ್ರಾರ್ ಚಂದ್ರನ್ ವಿ. ನಿರ್ವಹಿಸಿದರು. ಕೆ.ಆರ್ ಜಯಾನಂದ ಸಾಲ ವಿತರಣೆ ಮಾಡಿದರು.
ಕೋ ಆಪರೇಟಿವ್ ಸೊಸೈಟಿ ಅಸಿಸ್ಟೆಂಟ್ ರಿಜಿಸ್ಟ್ರಾರ್ ಆಫ್ ಜನರಲ್ ರವೀಂದ್ರ ಎ. ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು. ಮೀಂಜ ಪಂಚಾಯತ್ ಅಧ್ಯಕೆÀ್ಷ ಸುಂದರಿ ಆರ್. ಶೆಟ್ಟಿ, ವರ್ಕಾಡಿ ಪಂ.ಅಧ್ಯಕೆÀ್ಷ ಭಾರತೀ ಸುಳ್ಯಮೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ದರು. ಮೊಹಮ್ಮದ್ ಸಾಲಿ ಕೆ. (ಅಸಿಸ್ಟೆಂಟ್ ಡೈರೆಕ್ಟರ್ ಆಫ್ ಕೋ ಆಪರೇಟಿವ್ ಸೊಸೈಟಿ ಆಡಿಟ್), ಕಮಲಾಕ್ಷಿ, ಅಬೂಬಕರ್ ಸಿದ್ದೀಕ್ ಪಾಡಿ, ಮೋಯಿದ್ದಿನ್ ಕುಂಞ, ಬಾಬು ಸಿ ಕುಳೂರು, ಬೈಜು ರಾಜ್, ರಾಮಚಂದ್ರ ಎಸ್, ಮೋಹನ ಬಿ., ಮೊಹಮ್ಮದ್ ಹನೀಫ್, ಶಾಂತರಾಮ ಶೆಟ್ಟಿ, ಪ್ರಭಾಕರ ಶೆಟ್ಟಿ, ವಿ ರಮೇಶನ್, ರಾಮಕೃಷ್ಣ ಕಡಂಬಾರ್, ಪುರುಷೋತ್ತಮ ಅರಿಬೈಲು, ಧೂಮಪ್ಪ ಶೆಟ್ಟಿ, ಅಬೂಬಕ್ಕರ್ ಪಿ.ಬಿ, ಸದಾನಂದ ಶೆಟ್ಟಿ, ಡಿ ಬೂಬ ಇವರಿಗೆ ಸೊಸೈಟಿಯ ವತಿಯಿಂದ ಗೌರವಾರ್ಪಣೆ ಮಾಡಲಾಯಿತು. ರವೀಂದ್ರ ಮಡ್ವ ವಂದಿಸಿದರು. ಸೊಸೈಟಿಯು ಕಳೆದ 15 ವರ್ಷಗಳಿಂದ ಮಜೀರ್ ಪಳ್ಳ ಕೇಂದ್ರೀಕರಿಸಿ ಯಶಸ್ವಿಯಾಗಿ ಮುನ್ನಡೆಯುತ್ತಾ ಬಂದಿದೆ.

Leave a Reply

Your email address will not be published. Required fields are marked *

You cannot copy content of this page