ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆ
ಹೊಸಂಗಡಿ: ವಿಶ್ವ ಪರಿಸರ ದಿನಾಚರಣೆಯಂಗವಾಗಿ ಸುರಕ್ಷಾ ದಂತ ಚಿಕಿತ್ಸಾಲಯ ಪರಿಸರದಲ್ಲಿ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ವತಿಯಿಂದ ನಿನ್ನೆ ವನಮಹೋತ್ಸವ ಕಾರ್ಯಕ್ರಮ ಜರಗಿತು. ಈ ವೇಳೆ ಮಾವು, ಹಲಸು, ಸಪೋಟ, ಪೇರಳೆ, ನೇರಳೆ ಮುಂತಾದ ಹಣ್ಣಿನ ಗಿಡಗಳನ್ನು ಸುಮಾರು ೫೫ ಮಂದಿಗೆ ವಿತರಿಸಲಾ ಯಿತು. ಅಬ್ದುಲ್ ನೌಶಾದ್ರಿಗೆ ಗಿಡ ನೀಡುವ ಮೂಲಕ ಡಾ| ಮುರಲೀ ಮೋಹನ ಚೂಂತಾರು ಉದ್ಘಾಟಿಸಿದರು. ಡಾ| ರಾಜಶ್ರೀ ಮೋಹನ್, ಡಾ| ಪ್ರಜ್ವಲ್, ರಮ್, ಚೈತ್ರ, ಸುಶ್ಮಿತಾ, ಜಯಶ್ರೀ ಉಪಸ್ಥಿತರಿದ್ದರು.