ರಾಷ್ಟ್ರೀಯ ಸೋಫ್ಟ್ಬೇಸ್ಬಾಲ್ ತಂಡಕ್ಕೆ ಆಯ್ಕೆ: ಶ್ರಾವ್ಯಳಿಗೆ ಕಾಂಗ್ರೆಸ್ನಿಂದ ಧನ ಸಹಾಯ
ಪೈವಳಿಕೆ: ನೇಪಾಳದ ಕಾಠ್ಮಂಡು ವಿನಲ್ಲಿ ನಡೆಯುವ ಅಂತಾರಾಷ್ಟ್ರೀಯ ಸೋಫ್ಟ್ ಬೇಸ್ಬಾಲ್ ಚಾಂಪ್ಯನ್ ಶಿಪ್ನಲ್ಲಿ ಭಾಗವಹಿಸಲು ಭಾರತ ತಂಡಕ್ಕೆ ಆಯ್ಕೆಯಾದ ಪೈವಳಿಕೆ ಪಂಚಾಯತ್ ನಿವಾಸಿ ಕನಿಯಾಲ ಯದ ಶ್ರಾವ್ಯಗಳಿಗೆ ಮಂಡಲ ಕಾಂಗ್ರೆಸ್ ಪಕ್ಷದ ವತಿಯಿಂದ ಧನ ಸಹಾಯ ನೀಡಲಾಯಿತು. ಇಬ್ರಾಹಿಂ ಕಯ್ಯಾರು ಅವರ ನೇತೃತ್ವದಲ್ಲಿ ಇನ್ಕಾಸ್ ಖತ್ತರ್ ಸಮಿತಿ ವತಿಯಿಂದ ಪಕ್ಷದ ಹಿತೈಷಿಗಳಿಂದ ಸಂಗ್ರಹಿಸಿದ ಮೊತ್ತವನ್ನು ಮಂಡಲ ಸಮಿತಿ ಅಧ್ಯಕ್ಷ ವಸಂತ ಕುಮಾರ್ ಮನೆಗೆ ತೆರಳಿ ಶ್ರಾವ್ಯಳಿಗೆ ಹಸ್ತಾಂತರಿಸಿದರು. ಈ ವೇಳೆ ಸುದೆಂಬಳ ವಾರ್ಡ್ ಸದಸ್ಯ ಸುಂದರ ಸುದೆಂಬಳ, ಲತೀಫ್ ಕೊಡಿ, ಶರೀಫ್ ಕೊಡಿ, ಚಂದ್ರಶೇಖರ ಚಾಕಟೆಗುಳಿ ಉಪಸ್ಥಿತರಿದ್ದರು.