ಸಿಪಿಐ ಮುಖಂಡ ಎಂ. ಕೃಷ್ಣ ಶೆಟ್ಟಿ ಸಂಸ್ಮರಣೆ
ಮಂಜೇಶ್ವರ: ಸಿಪಿಐ ಮಂಜೇಶ್ವರ ಮಂಡಲ ಮಾಜಿಕಾರ್ಯದರ್ಶಿ, ಮಜಿಬೈಲು ಸೇವಾ ಸಹಕಾರಿ ಬ್ಯಾಂಕ್ನ ಅಧ್ಯಕ್ಷರಾಗಿದ್ದ ಮೂಡಂಬೈಲು ಎಂ. ಕೃಷ್ಣ ಶೆಟ್ಟಿಯವರ ಸಂಸ್ಮರಣೆ ಕಾರ್ಯಕ್ರಮ ಅವರ ಸ್ಮೃತಿ ಮಂಟಪದಲ್ಲಿ ಜರಗಿತು. ಸಿಪಿಐ ಮಂಜೇಶ್ವರ ಮಂಡಲ ಕಾರ್ಯದರ್ಶಿ ರಾಮಕೃಷ್ಣ ಕಡಂಬಾರ್ ಉದ್ಘಾಟಿಸಿದರು. ಸತೀಶ ಪಜಿಂಗಾರು ಅಧ್ಯಕ್ಷತೆ ವಹಿಸಿದರು.
ಜಿಲ್ಲಾ ಸಮಿತಿ ಸದಸ್ಯ, ಮೀಂಜ ಪಂ. ಉಪಾದ್ಯಕ್ಷ ಜಯರಾಮ ಬಲ್ಲಂಗುಡೇಲು, ಮಜಿಬೈಲು ಬ್ಯಾಂಕ್ ಅಧ್ಯಕ್ಷ ಶಾಂತರಾಮ ಶೆಟ್ಟಿ, ಕಾರ್ಯದರ್ಶಿ ಉದಯಕುಮಾರ್ ಕರಿಬೈಲು, ಸಿಪಿಐ ಕಡಂಬಾರು ಲೋಕಲ್ ಕಾರ್ಯದರ್ಶಿ ಹರೀಶ್ ಕೆ.ಆರ್., ಮೂಡಂಬೈಲು ಬ್ರಾಂಚ್ ಕಾರ್ಯದರ್ಶಿ ಆದರ್ಶ್ ಸಂತಡ್ಕ, ಕಿಶೋರ್ ಕುಳೂರು, ಹರಿಜೀವನ್ದಾಸ್, ಸರೋಜಿನಿ ಶೆಟ್ಟಿ, ಶಶಿಕಲ, ರೇಖಾ ಮಣಿ, ಮೀಂಜ ಲೋಕಲ್ ಕಾರ್ಯದರ್ಶಿ ಗಂಗಾಧರ ಕೊಡ್ಡೆ ಭಾಗವಹಿಸಿದರು.