ಕರ್ತವ್ಯ ವೇಳೆ ರೈಲ್ವೇ ನೌಕರ ರೈಲು ಢಿಕ್ಕಿ ಹೊಡೆದು ಮೃತ್ಯು

ಕುಂಬಳೆ: ರೈಲು ಹಳಿ ಪರಿಶೀಲನೆ ನಡೆಸುತ್ತಿದ್ದಾಗ ರೈಲ್ವೇ ಟ್ರಾಕ್‌ಮೆನ್ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ಸಂಭವಿಸಿದೆ. ಆಂಧ್ರ ಪ್ರದೇಶ ನಿವಾಸಿ ಪಾಗ್ವೋಟಿ ನವೀನ್ (೨೫) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇಂದು ಬೆಳಿಗ್ಗೆ ೯.೧೫ರ ವೇಳೆ ಘಟನೆ ನಡೆದಿದೆ.

ಮುಟ್ಟಂನಿಂದ ಕುಂಬಳೆ ವರೆಗಿನ ರೈಲ್ವೇ ಹಳಿಯ ವಿಚಾರಣೆ ಹೊಣೆಗಾರಿಕೆ ನವೀನ್‌ಗಾಗಿತ್ತು. ಇಂದು ಬೆಳಿಗ್ಗೆ ಶಿರಿಯ ಸೇತುವೆ ಸಮೀಪದಲ್ಲಿ ಹಳಿ ಪರಿಶೀಲಿಸುತ್ತಿದ್ದಾಗ ಮಂಗಳೂರಿಗೆ ತೆರಳುತ್ತಿದ್ದ ಚೆನ್ನೈ ಸೂಪರ್ ಫಾಸ್ಟ್ ರೈಲು ಢಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ. ವಿಷಯ ತಿಳಿದು ರೈಲ್ವೇ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ನವೀನ್ ಕೆಲವೇ ದಿನಗಳ ಹಿಂದೆಯಷ್ಟೇ ಸೇವೆಗೆ ಪ್ರವೇಶಿಸಿದ್ದಾರೆ. ಘಟನೆ ಬಗ್ಗೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

You cannot copy contents of this page