ಬಿಎಂಎಸ್ ಕುಂಬಳೆ ವಲಯ ಸಮಿತಿಯಿಂದ ಪಂಚಾಯತ್ ಧರಣಿ

ಉಪ್ಪಳ: ವಿವಿಧ ಬೇಡಿಕೆಗಳನ್ನು ಮುಂದಿಟ್ಟು ರಾಜ್ಯವ್ಯಾಪಕವಾಗಿ ಬಿಎಂಎಸ್ ನಡೆಸುವ ಮುಷ್ಕರದ ಅಂಗವಾಗಿ ಈ ತಿಂಗಳ ೧೫ರಂದು ಕುಂಬಳೆ, ಪುತ್ತಿಗೆ, ೧೭ರಂದು ಮಂಗಲ್ಪಾಡಿ, ಪೈವಳಿಕೆ ಪಂ. ಧರಣಿ ನಡೆಸಲು ತೀರ್ಮಾನಿಸಲಾಗಿದೆ. ಬಿಎಂಎಸ್ ಕುಂಬಳೆ ವಲಯ ಸಭೆ ಕುಂಬಳೆ ಜಯಮಾರುತಿ ವ್ಯಾಯಾಮಶಾಲೆಯಲ್ಲಿ ನಡೆದಿದ್ದು, ವಲಯಾಧ್ಯಕ್ಷ ವೇಣುಗೋಪಾಲ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಜೊತೆ ಕಾರ್ಯದರ್ಶಿ ಹರೀಶ್ ಕುದ್ರೆಪ್ಪಾಡಿ ಉದ್ಘಾಟಿಸಿದರು. ಸುರೇಶ್ ದೇಳಿ ಮಾತನಾಡಿದರು. ಶಿವಾನಂದ ರಾವ್ ಸ್ವಾಗತಿಸಿ, ಶಶಿಧರ ವಂದಿಸಿದರು.

You cannot copy contents of this page