ತೆಲಂಗಾನ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ನಾಳೆ ಪ್ರಮಾಣವಚನ ಸ್ವೀಕಾರ

ಹೈದರಾಬಾದ್: ತೆಲಂಗಾನ ಚುನಾ ವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಗೆಲುವಿನ ನಗೆ ಬೀರಿರುವ ಕಾಂಗ್ರೆಸ್ ನಾಳೆ ಇದೇ ಮೊದಲ ಬಾರಿಯಾಗಿ ತೆಲಂಗಾನದಲ್ಲಿ  ಸರಕಾರ ರಚಿಸಲಿದೆ. ಹೈದರಾಬಾದ್‌ನ ಎಲ್ಬಿ ಸ್ಟೇಡಿಯಂನಲ್ಲಿ ಕಾಂಗ್ರೆಸ್‌ನ ಅತ್ಯಂತ  ಪ್ರಭಾವಿ ನೇತಾರ, ರಾಜ್ಯ ಅಧ್ಯಕ್ಷರೂ ಆಗಿರುವ ರೇವಂತ್ ರೆಡ್ಡಿ ನಾಳೆ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವರು.  ತನ್ನ ನೇತೃತ್ವದಲ್ಲಿ ಸರಕಾರ ರಚಿಸುವ ಪ್ರಸ್ತಾವವನ್ನು ರೇವಂತ್ ರೆಡ್ಡಿ ತೆಲಂಗಾನ ರಾಜ್ಯಪಾಲರಿಗೆ ಈಗಾಗಲೇ ಸಲ್ಲಿಸಿದ್ದಾರೆ.

RELATED NEWS

You cannot copy contents of this page