ಅಸೌಖ್ಯ: ಅಧ್ಯಾಪಿಕೆ ನಿಧನ

ಉಪ್ಪಳ: ಕೊಡ್ಲಮೊಗರು ಶ್ರೀ ವಾಣಿವಿಜಯ ಹೈಸ್ಕೂಲ್ ಅಧ್ಯಾಪಕ, ಕುಬಣೂರು ವಿದ್ಯಾ ನಗರ ನಿವಾಸಿ ಹರಿನಾಥ ಕೆ.ಪಿ.ರವರ ಪತ್ನಿ ರೂಪಶ್ರೀ (೩೯) ನಿಧನ ಹೊಂದಿದರು. ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು.

ಕೊಂಡೆವೂರು ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದಲ್ಲಿ ಅಧ್ಯಾಪಿಕೆಯಾಗಿ ಸೇವೆ ಸಲ್ಲಿಸಿದ್ದ ಇವರು ಏಳ್ಕಾನ ಕೆದ್ವಾರ್ ರಾಮಚಂದ್ರ- ಕಮಲ ದಂಪತಿ ಪುತ್ರಿಯಾಗಿದ್ದಾರೆ. ಮೃತರು ಪತಿ, ಪುತ್ರಿ ದೃತಿ ಶೆಟ್ಟಿ, ಸಹೋದರಿ ಯರಾದ ಶಶಿ, ಪವಿತ್ರ, ಸಹೋದರ ಪ್ರಸನ್ನ ಹಾಗೂ ಬಂಧು-ಬಳಗವನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page