ಗಾಂಜಾ ಸಸಿ, ಗಾಂಜಾ, ಮದ್ಯ, ವಾಹನ ವಶ: ಐದು ಮಂದಿ ಸೆರೆ

ಕಾಸರಗೋಡು: ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಯ ವೇಳೆ ಹೊರ ರಾಜ್ಯಗಳಿಂದ ಜಿಲ್ಲೆಗೆ ಭಾರೀ ಪ್ರಮಾಣದಲ್ಲಿ ಮದ್ಯ ಮತ್ತಿತರ ಮಾದಕ ದ್ರವ್ಯ ಹರಿದು ಬರುವ ಸಾಧ್ಯತೆಯನ್ನು ಪರಿಗಣಿಸಿ ಅದನ್ನು  ತಡೆಗಟ್ಟಲು ಅಬಕಾರಿ ಇಲಾಖೆ ಆರಂ ಭಿಸಿರುವ ದಾಳಿ ಇನ್ನೂ ಜೋರಾ ಗಿಯೇ ಮುಂದುವರಿಯುತ್ತಿದೆ.

ಇದರಂತೆ ಜಿಲ್ಲೆಯ ವಿವಿಧೆಡೆ ಗಳಲ್ಲಿ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಕರ್ನಾಟಕ ನಿರ್ಮಿತ ಮದ್ಯ, ಗಾಂಜಾ ಮತ್ತು ಗಾಂಜಾ ಸಸಿಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಮಾತ್ರವಲ್ಲ ಇದಕ್ಕೆ ಸಂಬಂಧಿಸಿ ಐವರನ್ನು ಸೆರೆ ಹಿಡಿಯಲಾಗಿದೆ. ಹಾಗೂ ಎರಡು ವಾಹನಗಳನ್ನೂ ವಶಕ್ಕೆ ತೆಗೆದು ಕೊಂಡಿದೆ. ಇದರಂತೆ ಕಾಸರಗೋಡು ಅಬಕಾರಿ ರೇಂಜ್ ಕಚೇರಿಯ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ ಜೋಸೆಫ್ ಜೆ.ರ ನೇತೃತ್ವದ ಅಬಕಾರಿ ತಂಡ ಚಟ್ಟಂಚಾಲ್ ರಸ್ತೆಯ ಹೈಯರ್ ಸೆಕೆಂಡರಿ ಶಾಲಾ ಪರಿಸರದಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಸ್ಕೂಟರೊಂದರಲ್ಲಿ ಸಾಗಿಸಲಾಗುತ್ತಿದ್ದ ೩೩.೫೭ ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಚೆಂಗಳ ಕೆ.ಕೆ. ಪುರಂ ಹರಿಪ್ರಸಾದ್ ಕೆ.ಜಿ. (೪೫) ಎಂಬಾತ ನನ್ನು ಸ್ಕೂಟರ್ ಸಹಿತ ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಇದೇ ತಂಡ ಮೊನ್ನೆ ಪಟ್ಲ ಕೊಲ್ಯ ಬಳಿ ನಡೆಸಿದ ಇನ್ನೊಂದು ಕಾರ್ಯಾ ಚರಣೆಯಲ್ಲಿ ೧೮೦ ಎಂ.ಎಲ್‌ನ  ೫೦ ಬಾಟಲಿ ಗೋವಾ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಈ ಮಾಲುಗಳನ್ನು ಕೊಳವೆಯೊಂದರೊಳಗೆ ಬಚ್ಚಿಡಲಾಗಿತ್ತು. ಇದಕ್ಕೆ ಸಂಬಂಧಿಸಿ ಪಟ್ಲ ಕೊಲ್ಯದ ಸಂದೀಪ್ ಕೆ.ಸಿ. (೩೯) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಈ ಎರಡು ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಪ್ರಿವೆಂಟಿವ್ ಆಫೀಸರ್ ರಂಜಿತ್ ಕೆ.ವಿ, ಸಿಇಒಗಳಾದ ಶರತ್ ಕೆ.ಪಿ, ಪಿ. ಮುರಳೀಧರನ್, ಶ್ಯಾಮ್ ಜಿತ್, ಮೊಹಮ್ಮದ್ ಇಜಾಸ್, ರಾಜೇಶ್, ಶುಭ, ಫಸೀಲಾ ಎಂಬವರು ಒಳಗೊಂಡಿದ್ದರು.

ಕುಂಬಳೆ ರೇಂಜ್‌ನ ಎಕ್ಸೈಸ್ ಇನ್ಸ್‌ಪೆಕ್ಟರ್ ವಿ.ವಿ. ಪ್ರಸನ್ನ ಕುಮಾರ್‌ರ ನೇತೃತ್ವದ ಅಬಕಾರಿ  ತಂಡ ಉಪ್ಪಳ ಟೆಲಿಫೋನ್ ಎಕ್ಸ್‌ಚೇಂಜ್ ಗೇಟಿನ ಬಳಿ ಮೊನ್ನೆ ನಡೆಸಿದ ಕಾರ್ಯಾ ಚರಣೆಯ ೫೦ ಗ್ರಾಂ ಗಾಂಜಾ ಪತ್ತೆಹಚ್ಚಿ ವಶಪಡಿಸಿದೆ. ಇದಕ್ಕೆ ಸಂಬಂಧಿಸಿ ಉಪ್ಪಳ ಪಚ್ಲಂಪಾರೆಯ ಮೊಹಮ್ಮದ್ ಅಶ್‌ಫಾಕ್ (೪೫) ಎಂಬಾತನನ್ನು  ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಪ್ರಿವೆಂಟೀವ್ ಆಫೀಸರ್ ಗಳಾದ ಮನಾಸ್ ಕೆ.ವಿ, ಶ್ರೀನಿವಾಸನ್ ಪತ್ತಿಲ್, ಸಿಇಒ ರಮೇಶನ್, ಅಖಿಲೇಷ್, ಹಮೀದ್ ಮತ್ತು ಚಾಲಕ ಪ್ರವೀಣ್ ಎಂಬವರು ಒಳಗೊಂಡಿದ್ದಾರೆ.

ಕೂಡ್ಲು ಗ್ರಾಮದ ಕುಟ್ಟಜಕಟ್ಟೆಯಲ್ಲಿ  ಕಾಸರಗೋಡು ಅಬಕಾರಿ ಸರ್ಕಲ್ ಕಚೇರಿಯ ಪ್ರಿವೆಂಟಿವ್ ಆಫೀಸರ್ ಮೋಹನನ್‌ರ ನೇತೃತ್ವದ ತಂಡ ಮೊನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ೧೮೦ ಎಂ.ಎಲ್‌ನ ೮೨ ಟೆಟ್ರಾ ಪ್ಯಾಕೇಟ್, ಕರ್ನಾಟಕ ನಿರ್ಮಿತ ಮದ್ಯ ಕೈವಶವಿರಿ ಸಿಕೊಂಡ ಆರೋಪದಂತೆ ಕೂಡ್ಲಿನ ರಾಜೇಂದ್ರನ್ (೪೩) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ  ಪ್ರಿವೆಂ ಟಿವ್ ಆಫೀಸರ್ ಜನಾರ್ಧನನ್ ಮತ್ತು ಸಿ.ಇ.ಒ ಅಭಿಲಾಷ್ ಎಂಬವರೂ ಒಳಗೊಂಡಿದ್ದರು.

ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ಆಂಟಿ ನರ್ಕೋಟಿಕ್ ಸ್ಪೆಷಲ್ ಸ್ಕ್ವಾಡ್‌ನ ಇನ್ಸ್‌ಪೆಕ್ಟರ್ ರಾಧಾ ಕೃಷ್ಣನ್ ಪಿ.ಜಿ.ಯವರ ನೇತೃತ್ವ ಅಬಕಾರಿ ತಂಡ ಎಕ್ಸೈಸ್ ಸೈಬರ್ ಸೋಶ್ಯಲ್ ಮೀಡಿಯಾ ಮೂಲಕ ಲಭಿಸಿದ ದೂರಿನಂತೆ ನಿನ್ನೆ ಉದುಮ ಪಡಿಞಾರ್‌ನ ಖಾಸಗಿ ಹಿತ್ತಿಲೊಂ ದರಲ್ಲಿ ನಡೆಸಿದ

ತಪಾಸಣೆಯಲ್ಲಿ ೧.೫ ಮೀ ಟರ್ ನಷ್ಟು ಬೆಳೆದ  ಗಾಂಜಾ ಸಸಿ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಆದರೆ ಇದಕ್ಕೆ ಸಂಬಂಧಿಸಿ ಸದ್ಯ ಯಾರ ವಿರುದ್ಧವೂ ಪ್ರಕರಣ ದಾಖಲಿಸಲಾಗಿಲ್ಲವೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page