ಆರ್‌ಎಸ್‌ಎಸ್ ಉಪ್ಪಳ ಮಂಡಲದ ವಿಜಯದಶಮಿ ಉತ್ಸವ

ಉಪ್ಪಳ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಉಪ್ಪಳ ಮಂಡಲ ಇದರ ಆಶ್ರಯದಲ್ಲಿ ವಿಜಯದಶಮಿ ಉತ್ಸವ ನಿನ್ನೆ ಸಂಜೆ ಪ್ರತಾಪನಗರ ಶಿವಶಕ್ತಿ ಮೈದಾನದಲ್ಲಿ ನಡೆಯಿತು. ಇದರ ಅಂಗವಾಗಿ ಕೋಡಿಬೈಲು ಯಶೋನಂದ ನಗರ ಮೈದಾನದಿಂದ ಆರಂಭಿಸಿದ ನೂರಾರು ಸ್ವಯಂಸೇವಕರು ಭಾಗವಹಿಸಿದ ಪಥಸಂಚಲನ ಕೈಕಂಬ ದಾರಿಯಾಗಿ ಪ್ರತಾಪನಗರ ಶಿವಶಕ್ತಿ ಮೈದಾನದಲ್ಲಿ ಸಮಾಪ್ತಿಗೊಂಡಿತು. ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಧನ್‌ರಾಜ್ ಎ ಸುಭಾಷ್‌ನಗರ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರ. ಆರ್‌ಎಸ್‌ಎಸ್ ಕಾಸರಗೋಡು ಜಿಲ್ಲಾ ಕಾರ್ಯವಾಹ್ ಪವಿತ್ರನ್ ಬಿ ಬೌದ್ಧಿಕ್ ನೀಡಿದರು.

You cannot copy contents of this page