ಬೈಕ್‌ಗೆ ಕಾರು ಢಿಕ್ಕಿ ಹೊಡೆದು ಅಪಘಾತ: ಗಾಯಗೊಂಡ ಇಲೆಕ್ಟ್ರೀಶ್ಯನ್ ಮೃತ್ಯು

ಮುಳ್ಳೇರಿಯ: ವಾಹನ  ಅಪಘಾ ತದಲ್ಲಿ ಗಂಭೀರ ಗಾಯ ಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಲ್ಲಿದ್ದ ಇಲೆಕ್ಟ್ರೀಶ್ಯನ್ ಮೃತಪಟ್ಟಿದು,  ಈ ದಾರುಣ ಘಟನೆ ಯಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ.

ಕರ್ಮಂತೋಡಿ ಬಳಿಯ ಕೊಟ್ಟಂ ಗುಳಿ ನಿವಾಸಿ ಕೆ. ಅಶೋಕನ್ (55) ಎಂಬವರು ಮೃತಪಟ್ಟ ದುರ್ದೈವಿಯಾಗಿ ದ್ದಾರೆ. ಸೆಪ್ಟಂಬರ್ ೧೯ರಂದು ಸೌತ್ ಪೊಯಿನಾಚಿ ಸಮೀಪ ಅಪಘಾತ ಸಂಭವಿಸಿತ್ತು. ಅಶೋಕನ್ ಹಾಗೂ ಸ್ನೇಹಿತ ಸಂಚರಿಸುತ್ತಿದ್ದ ಬೈಕ್‌ಗೆ ಕಾರು  ಢಿಕ್ಕಿ ಹೊಡೆದಿತ್ತು. ಇದರಿಂದ ಅಶೋಕನ್ ಗಂಭೀರ ಗಾಯ ಗೊಂಡಿದ್ದರು.   ನಿನ್ನೆ ಬೆಳಿಗ್ಗೆ ಚಿಕಿತ್ಸೆಯಲ್ಲಿದ್ದಂತೆ ಆಸ್ಪತ್ರೆಯಲ್ಲಿ ನಿಧನ ಸಂಭವಿಸಿದೆ.   ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ತಚ್ಚಂಗಾಡ್ ಪ್ರಿಯದರ್ಶಿನಿ ಮಂದಿರ ಹಾಗೂ ಪೊಯಿನಾಚಿಯಲ್ಲಿ ಸಾರ್ವಜನಿಕ ದರ್ಶನಕ್ಕಿರಿಸಲಾಯಿತು. ಅನಂತರ ಕೊಟ್ಟಂಗುಳಿಯಲ್ಲಿರುವ ಮನೆಗೆ ತಲುಪಿಸಿ ಅಂತ್ಯ ಸಂಸ್ಕಾರ ನಡೆಸಲಾಯಿತು.

ಅಶೋಕನ್ ನುರಿತ ಇಲೆಕ್ಟ್ರೀಶ್ಯನ್ ಮಾತ್ರವಲ್ಲದೆ  ಕ್ರೀಡಾಪಟುವಾಗಿಯೂ ಗುರುತಿಸಿಕೊಂಡಿದ್ದರು. ಫುಟ್ಬಾಲ್, ವಾಲಿಬಾಲ್ ಕ್ರೀಡಾಪಟುವಾಗಿದ್ದ ಇವರು ತಚ್ಚಂಗಾಡ್‌ನ ಪ್ರಿಯದರ್ಶಿನಿ ಕ್ಲಬ್‌ನ ಪರವಾಗಿ ಆಡುತ್ತಿದ್ದರು. ಅಲ್ಲದೆ ಹಲವು ಮಕ್ಕಳಿಗೆ ತರಬೇತಿಯನ್ನು ನೀಡಿದ್ದರು. ಕೆಲಸದ ಸೌಕರ್ಯಾರ್ಥ ಅಶೋಕನ್ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಮೈಲಾಟಿಯ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದರು.

ಮೃತರು ಪತ್ನಿ ತಂಗಮಣಿ, ಮಕ್ಕಳಾದ ಆರ‍್ಯ, ಆರ್ದ್ರ, ಆರೋಮಲ್, ಸಹೋದರ-ಸಹೋದರಿಯರಾದ ಕೆ. ಬಾಲಕೃಷ್ಣನ್ (ನಿವೃತ್ತ ಎಸ್‌ಐ), ಪ್ರಭಾಕರನ್, ಸರಸ್ವತಿ, ನಳಿನಿ, ಉಷ, ಪ್ರಸನ್ನ, ಅನಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ಸುಧಾಕರನ್ ಈ ಹಿಂದೆ ನಿಧನರಾಗಿದ್ದಾರೆ.

You cannot copy contents of this page