ಸಿಡಿಲು ಬಡಿದು ಮನೆ ಬಿರುಕು: ವಯರಿಂಗ್ ನಾಶ

ಉಪ್ಪಳ: ಸಿಡಿಲಿನ ಆಘಾತಕ್ಕೆ ಮನೆ ಬಿರುಕು ಬಿಟ್ಟು ವಯರಿಂಗ್ ಪೂರ್ತಿ ಉರಿದು ಹೋದ ಘಟನೆ ನಡೆದಿದೆ. ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಬಂದ್ಯೋಡು ಪರಿಶಿಷ್ಟ ಪಂಗಡದವರ ಕೇಂದ್ರ ನಿವಾಸಿ ಕೂಲಿ ಕಾರ್ಮಿಕ ಉಮೇಶ ಎಂಬವರ ಮನೆಗೆ ಶನಿವಾರ ಸಂಜೆ ಸಿಡಿಲು ಬಡಿದಿದೆ. ಈ ವೇಳೆ ಮನೆಯ ಗೋಡೆ ಬಿರುಕು ಬಿಟ್ಟು ವಯರಿಂಗ್ ಪೂರ್ತಿ ಉರಿದು ಹೋಗಿದ್ದು, ವಿದ್ಯುತ್ ಉಪಕರಣಗಳು ಹಾನಿಗೊಂಡಿದೆ.
ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಮಂಗಲ್ಪಾಡಿ ವಿಲೇಜ್ ಅಧಿಕಾರಿಗಳು, ಪಂಚಾಯತ್ ಸದಸ್ಯರಾದ ಕಿಶೋರ್ ಕುಮಾರ್, ಬಾಬು ಬಂದ್ಯೋಡು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.

RELATED NEWS

You cannot copy contents of this page