ನ್ಯಾಯವಾದಿ ಮನೆಯಿಂದ ಚಿನ್ನ, ಬೆಳ್ಳಿ ಆಭರಣ ಕಳವು: ತನಿಖೆ ತೀವ್ರ; ಹಲವು ಬೆರಳಚ್ಚುಗಳು ಲಭ್ಯ

ಕುಂಬಳೆ: ನಾಯ್ಕಾಪಿನಲ್ಲಿ ನ್ಯಾಯವಾದಿ ಮನೆಯಿಂದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ನಗದು ಕಳವುಗೈದ ಪ್ರಕರಣದಲ್ಲಿ  ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.  ಫಾರೆನ್ಸಿಕ್ ತಜ್ಞರು ನಡೆಸಿದ ಪರಿಶೀಲನೆಯಲ್ಲಿ ಕಳ್ಳರದ್ದೆಂದು ಸಂಶಯಿಸುವ ಹಲವು ಬೆರಳಚ್ಚುಗಳು ಲಭಿಸಿದೆ.  ಪೊಲೀಸ್ ಶ್ವಾನ ಮನೆ ಹಾಗೂ ಪರಿಸರದಲ್ಲಿ ವಾಸನೆ ಹಿಡಿದ ಬಳಿಕ ರಸ್ತೆ ಬಳಿವರೆಗೆ ಓಡಿ ನಿಂತಿದೆ. ಆದ್ದರಿಂದ ಕಳ್ಳರು ವಾಹನದಲ್ಲಿ ಬಂದು ಕಳವು ನಡೆಸಿ ಬಳಿಕ ಅದರಲ್ಲೇ ಪರಾರಿಯಾಗಿರ ಬಹುದೆಂದು  ಸಂಶಯಿ ಸಲಾಗುತ್ತಿದೆ. ಕುಂಬಳೆ ಪೊಲೀಸ್ ಇನ್‌ಸ್ಪೆಕ್ಟರ್ ಟಿ.ಕೆ.ಮುಕುಂದನ್, ಎಸ್‌ಐ ಕೆ. ಶ್ರೀಜೇಶ್ ಎಂಬಿವರ ನೇತೃತ್ವದಲ್ಲಿ ಪ್ರತ್ಯೇಕ ತನಿಖಾ ತಂಡ ರೂಪೀಕರಿಸ ಲಾಗಿದೆ.

ಕಾಸರಗೋಡು ಬಾರ್‌ನ ನ್ಯಾಯವಾದಿಯಾಗಿರುವ ಚೈತ್ರಾರ ನಾಯ್ಕಾಪಿನಲ್ಲಿರುವ ಮನೆಯಿಂದ ಕಳೆದ  ಆದಿತ್ಯವಾರ ರಾತ್ರಿ ಕಳವು ನಡೆದಿದೆ. ಮನೆಯ ಹಿಂಭಾಗದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ನಗದನ್ನು ದೋಚಿದ್ದಾರೆ. ಚೈತ್ರಾ ಹಾಗೂ ಕುಟುಂಬ ಮನೆಗೆ ಬೀಗ ಜಡಿದು ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರದ ಜಾತ್ರೆಗೆ ತೆರಳಿದ್ದರು.  ರಾತ್ರಿ ೮ಗಂಟೆ ವೇಳೆ ಮರಳಿದಾಗ ಮನೆಯಿಂದ ಕಳವಿಗೀಡಾದ ವಿಷಯ ತಿಳಿದುಬಂದಿದೆ.

RELATED NEWS

You cannot copy contents of this page