ಹುಲ್ಲು ಹೆರೆಯುತ್ತಿದ್ದ ವೇಳೆ  ಬಿದ್ದು ಗಾಯಗೊಂಡ ವ್ಯಕ್ತಿ ಮೃತ್ಯು

ಬದಿಯಡ್ಕ:  ಹುಲ್ಲು ಹೆರೆಯುತ್ತಿದ್ದ ವೇಳೆ ಹೊಂಡಕ್ಕೆ ಬಿದ್ದು  ಗಾಯಗೊಂಡು ಚಿಕಿತ್ಸೆಯ ಲ್ಲಿದ್ದ ವ್ಯಕ್ತಿ ಮೃತಪಟ್ಟರು. ಮುಂಡ್ಯತ್ತಡ್ಕ ಸಮೀಪದ ಮಲಂಗರದ ಮುಹಮ್ಮದ್ (75) ಮೃತಪಟ್ಟ ವ್ಯಕ್ತಿ. ಈ ತಿಂಗಳ ೨೫ರಂದು ಸಂಜೆ  ಮನೆ ಸಮೀಪ ಹುಲ್ಲು ಹೆರೆಯುತ್ತಿದ್ದ ವೇಳೆ ಆಯತಪ್ಪಿ ಹೊಂಡಕ್ಕೆ ಬಿದ್ದಿದ್ದರೆನ್ನಲಾಗಿದೆ. ಇದರಿಂದ  ಗಾಯಗೊಂಡ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ನಿಧನ ಸಂಭವಿಸಿದೆ.

ಮೃತರು ಪತ್ನಿ ಬೀಫಾತಿಮ, ಮಕ್ಕಳಾದ ಲತೀಫ್, ಬಶೀರ್, ಅಸೀಸ್,ಆಯಿಶ, ಅವ್ವಮ್ಮ, ನಫೀಸ, ಮೈಮೂನ,ಸಮೀರ,ಅಳಿಯ-ಸೊಸೆಯಂದಿರಾದ ಕಲಂದರ ಬೀವಿ, ಫಾಯಿಸ, ತಸ್ರೀನ, ಅಬ್ದುರಹ್ಮಾನ್ (ಶೇಣಿ), ಇಸ್ಮಾಯಿಲ್ (ಬಂದ್ಯೋ ಡು), ಜಬ್ಬಾರ್ (ಸೀತಾಂಗೋಳಿ), ಖಾಲಿದ್(ಆಲಂಪಾಡಿ) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page