ಕುಂಬಳೆ: ಆರಿಕ್ಕಾಡಿಯಲ್ಲಿ ಟೋಲ್ ಸಂಗ್ರಹ ನಿಲುಗಡೆಗೊಳಿಸಲು ಕೇಂದ್ರ ಸರಕಾರ ಕೈಗೊಂಡ ತೀರ್ಮಾನದ ಹಿನ್ನೆಲೆಯಲ್ಲಿ ಇದುವರೆಗೆ ಇಲ್ಲಿ ಸಂಗ್ರಹಿಸಿದ ಟೋಲ್ ಹಿಂತಿರುಗಿಸಬೇಕೆಂದು ಸಿಪಿಎಂ ಆಗ್ರಹಿಸಿದೆ. ಸಿಪಿಎಂ ಹಾಗೂ ಜನಪರ ಹೋರಾಟ ಸಮಿತಿ ನಡೆಸಿದ ಆಂದೋಲನ ಕೇಂದ್ರಸರಕಾರಕ್ಕೆ ಬಿಸಿ ಮುಟ್ಟಿಸಿದ್ದು, ಈಗ ಟೋಲ್ ರದ್ದುಪಡಿಸಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಇದುವರೆಗೂ ಹೋರಾಟ ನಡೆಸಿದ ಸ್ಥಳೀಯರ ಮೇಲೆ ದಾಖಲಿಸಿದ ಕೇಸು, ಆರ್ಥಿಕ ನಷ್ಟಗಳನ್ನು ಪರಿಹರಿಸಬೇಕೆಂದು ಸಿಪಿಎಂ ಮಂಜೇಶ್ವರ ಏರಿಯಾ ಸಮಿತಿ ಕಾರ್ಯದರ್ಶಿ ಕೆ.ಆರ್. ಜಯಾನಂದ ಒತ್ತಾಯಿಸಿದ್ದಾರೆ.






