ಮೊಗ್ರಾಲ್ ಪುತ್ತೂರು: ಕಾವುಗೋಳಿ ಚೌಕಿ ಎರಿಯಾಕೋಟ ಭಗವತೀ ಕ್ಷೇತ್ರದ ಕಳಿಯಾಟ ಮಹೋತ್ಸವದಂಗವಾಗಿ ಕೇರಳ ರಾಜ್ಯ ವ್ಯಾಪಾರಿ ವ್ಯವಸಾಯಿ ಸಮಿತಿ ಮೊಗ್ರಾಲ್ ಪುತ್ತೂರು ಘಟಕ ತರಕಾರಿ ಹಾಗೂ ಧಾನ್ಯಗಳನ್ನು ನೀಡಿತು. ಕ್ಷೇತ್ರ ಪದಾಧಿಕಾರಿಗಳು ವ್ಯಾಪಾರಿಗಳಿಗೆ ಸ್ವಾಗತ ನೀಡಿದರು. ವ್ಯಾಪಾರಿ ವ್ಯವಸಾಯಿ ಸಮಿತಿ ಜಿಲ್ಲಾ ಜೊತೆ ಕಾರ್ಯದರ್ಶಿ ರಿಯಾಸ್ ಚೌಕಿ, ಲೇಬರ್ ಡಿಪಾರ್ಟ್ಮೆಂಟ್ ಆಫೀಸರ್ ಅಬ್ದುಲ್ ಸಲಾಂ, ಏರಿಯಾ ಕಾರ್ಯದರ್ಶಿ ಪ್ರಕಾಶನ್, ಮರ್ಕಂಟೈಲ್ ಸೊಸೈಟಿ ಕಾರ್ಯದರ್ಶಿ ಕುಂಞಿರಾಮನ್,ವ್ಯಾಪಾರಿ ವ್ಯವಸಾಯಿ ಸಮಿತಿ ಘಟಕ ಅಧ್ಯಕ್ಷ ವಿಜಯನ್, ಮಹಿಳಾ ವಿಂಗ್ ಕಾರ್ಯದರ್ಶಿ ಜಾನಕಿ, ಹಕೀಂ ಕಂಬಾರು, ವ್ಯಾಪಾರಿಗಳು ಭಾಗವಹಿಸಿದರು.







