ಪೈವಳಿಕೆ: ಆರೋಗ್ಯ ಸಚಿವೆ ವೀಣಾ ಜೋರ್ಜ್ರ ವಿರುದ್ಧ ಕಾಂಗ್ರೆಸ್ ಹಾಗೂ ಕೆಎಸ್ಯು ನಡೆಸಿದ ಆಕ್ರಮಣದ ವಿರುದ್ಧ ಸಿಪಿಎಂ ಪೈವಳಿಕೆ ಲೋಕಲ್ ಸಮಿತಿ ವತಿಯಿಂದ ಪೈವಳಿಕೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಆರೋಗ್ಯರಂಗದಲ್ಲಿ ಕೇರಳ ಪ್ರಥಮ ಸ್ಥಾನದಲ್ಲಿದ್ದು ಇದಕ್ಕೆ ಕಾರಣಕರ್ತೆಯಾದ ವೀಣಾ ಜೋರ್ಜ್ರ ವಿರುದ್ಧ ಕಾಂಗ್ರೆಸ್ ಇಲ್ಲಸಲ್ಲದ ಆರೋಪಗಳನ್ನು ಹೊರಿಸುತ್ತಿರುವುದರ ಬಗ್ಗೆ ಜನರಿಗೆ ತಿಳಿದಿದೆ ಎಂದು ಸಿಪಿಎಂನ ಮೆರವಣಿಗೆಯಲ್ಲಿ ಮಾತನಾಡಿದ ಮುಖಂಡರು ತಿಳಿಸಿದರು.
ಹುಸೈನ್ ಮಾಸ್ತರ್ ಅಧ್ಯಕ್ಷತೆ ವಹಿಸಿದರು. ಲೋಕಲ್ ಕಾರ್ಯದರ್ಶಿ ಎಂ. ಚಂದ್ರ ನಾಯ್ಕ್ ಉದ್ಘಾಟಿಸಿದರು. ಬಾಬು ವಾದ್ಯಪಡ್ಪು, ರೋಬರ್ಟ್ ಮೊಂತೇರೊ ಮಾತನಾಡಿದರು. ರಾಜೇಶ್ ಚಿಪ್ಪಾರು ಸ್ವಾಗತಿಸಿ, ಸುರೇಶ್ ಪೈವಳಿಕೆ ವಂದಿಸಿದರು.







