ವರ್ಕಾಡಿ: ಆನೆಕಲ್ಲಿನಲ್ಲಿ ನಿನ್ನೆ ಕೋಳಿ ಅಂಕಕ್ಕೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಇವರ ಕೈಯಿಂದ 2೦೦೦ ರೂಪಾಯಿ ಹಾಗೂ ಒಂದು ಕೋಳಿಯನ್ನು ವಶಪಡಿಸಲಾಗಿದೆ. ಕರ್ನಾಟಕದ ಮಂಜನಹಳ್ಳಿ ನಿವಾಸಿ ಅಜಯ್ ಕುಮಾರ್ (34), ಉಪ್ಪಳ ಚೆರುಗೋಳಿ ರಸ್ತೆಯ ಸತೀಶ (40) ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ. ನಿನ್ನೆ ಅಪರಾಹ್ನ ೩.೩೦ಕ್ಕೆ ಆನೆಕಲ್ಲು ದೇವಸ್ಥಾನ ಪರಿಸರದ ಹಿತ್ತಿಲಲ್ಲಿ ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಮಾಹಿತಿ ಲಭಿಸಿ ಮಂಜೇಶ್ವರ ಎಸ್ಐಗಳಾದ ಉಮೇಶ್ ಹಾಗೂ ವೈಷ್ಣವ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದರು.






